Advertisement

ಉಡುಪಿ : ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಸೀಜ್ ಮಾಡಿದ ಜಿಲ್ಲಾಧಿಕಾರಿ

11:26 AM May 19, 2021 | Team Udayavani |

ಉಡುಪಿ : ಜಿಲ್ಲೆಯಲ್ಲಿ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡುತ್ತಿದ್ದ ವಾಹನಗಳನ್ನು ಜಿಲ್ಲಾಧಿಕಾರಿ ಸೀಜ್ ಮಾಡಿ,ಅಗತ್ಯ ವಸ್ತುಗಳ ಹೊರತುಪಡಿಸಿ  ಇತರೆ ವಸ್ತುಗಳನ್ನು ಮಾರಾಟಮಾಡುತ್ತಿದ್ದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಇದೇ ವೇಳೆ ಅನವಶ್ಯಕವಾಗಿ ತಿರುಗಾಡಿದ ಮತ್ತು  ದಿನಸಿ ತರಕಾರಿ ಖರೀದಿಗೆ ಮನೆ ಹತ್ತಿರ ಹೊರೆತುಪಡಿಸಿ ವಾಹನಗಳಲ್ಲಿ ಬಂದವರ ವಾಹನಗಳನ್ನು ಮಣಿಪಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರು 25ಕ್ಕೂ ಹೆಚ್ಚು ಕಾರ್ ಮತ್ತು 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ದಂಡ ವಸೂಲಿ ಮಾಡಿದ್ದಾರೆ.

ಮನೆ ಹತ್ತಿರವೇ ವಸ್ತುಗಳನ್ನು ಖರೀದಿಸಬೇಕು. ವಾಕಿಂಗ್ ಅಂತ ಹೊರಗಡೆ ಅನವಶ್ಯಕವಾಗಿ ಬಂದರೆ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಲಾಗುವುದು ಎಂದು ಮಣಿಪಾಲ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ..

Advertisement

Udayavani is now on Telegram. Click here to join our channel and stay updated with the latest news.

Next