Advertisement

KYC ಅಪ್‌ಡೇಟ್‌ ಮಾಡಲು ಬಂದ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ಪರ್ಕಳದ ವ್ಯಕ್ತಿ

02:36 PM Aug 22, 2022 | Team Udayavani |

ಉಡುಪಿ : ಕೆವೈಸಿ ಅಪ್‌ಡೇಟ್‌ ಮಾಡಲು ಅನಾಮಧೇಯ ಸಂದೇಶ ಬಂದಿದ್ದು, ಅದರಲ್ಲಿದ್ದ ಲಿಂಕ್‌ ಅನ್ನು ಕ್ಲಿಕ್‌ ಮಾಡಿದ ವ್ಯಕ್ತಿಯೊಬ್ಬರು ಸಾವಿರಾರು ರೂ. ಕಳೆದುಕೊಂಡ ಘಟನೆ ನಡೆದಿದೆ.

Advertisement

ಪರ್ಕಳದ ನಿವಾಸಿ ಸುಬ್ರಹ್ಮಣ್ಯ ಕೃಷ್ಣ ನಾಯ್ಕ ಅವರ ಮೊಬೈಲಿಗೆ ಕೆವೈಸಿ ಅಪ್‌ಡೇಟ್‌ ಮಾಡಲು ಸಂದೇಶವೊಂದು ಬಂದಿತ್ತು. ಈ ಸಂದೇಶವನ್ನು ಬ್ಯಾಂಕ್‌ನವರೇ ಕಳುಹಿಸಿರಬಹುದು ಎಂದು ತಿಳಿದ ಅವರು ಆ ಲಿಂಕ್‌ ಅನ್ನು ಓಪನ್‌ ಮಾಡಿ ಓಟಿಪಿಯನ್ನು ಅಪ್‌ಡೇಟ್‌ ಮಾಡಿದ ತತ್‌ಕ್ಷಣ ಸುಬ್ರಹ್ಮಣ್ಯ ಕೃಷ್ಣ ನಾಯ್ಕ ಅವರ ಈಶ್ವರ ನಗರ ಮಣಿಪಾಲ ಶಾಖೆಯ ಎಸ್‌ಬಿಐ ಖಾತೆಯಿಂದ 81,001 ರೂ., ಎಸ್‌ಬಿಐ ಪರ್ಕಳ ಬ್ಯಾಂಚ್‌ ಖಾತೆಯಿಂದ 12,803 ರೂ. ಸಹಿತ ಒಟ್ಟು 93,804 ರೂ. ಹಣ ಕಡಿತಗೊಂಡಿದೆ.

ಯಾರೋ ಅಪರಿಚಿತ ವ್ಯಕ್ತಿ ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ ಹಣವನ್ನು ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಿಕೊಂಡು ನಷ್ಟ ಉಂಟು ಮಾಡಿದ್ದಾನೆ ಎಂದು ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಶಿಕ್ಷಣ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತದೆ: ಡಾ. ಕೊಟ್ಟೂರು ಮಹಾಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next