Advertisement

ಉಡುಪಿ ಅಪರಾಧ ಸುದ್ದಿಗಳು

09:51 AM Apr 03, 2019 | Vishnu Das |

ಅಕ್ರಮ ಮದ್ಯ ವಶ
ಕುಂದಾಪುರ: ಕಾವ್ರಾಡಿ ಮುಳ್ಳುಗುಡ್ಡೆಲ್ಲಿ ಮಾರುತಿ ಆಮ್ನಿಯಲ್ಲಿ ಮದ್ಯ ಕೊಂಡೊಯ್ಯುತ್ತಿದ್ದಾಗ ಕಂಡ್ಲೂರು ಪೊಲೀಸರು ದಾಳಿ ನಡೆಸಿ ಆರೋಪಿ ಯನ್ನು ಬಂಧಿಸಿದ್ದಾರೆ.ಯಡಿಯಾಳ್‌ ಕೊಲ್ಲತ್ತಿಮನೆ ಸುಧೀರ ಕುಮಾರ್‌ ಆರೋಪಿ, 2.430 ಲೀ. ಮದ್ಯ ಹಾಗೂ ಮಾರಾಟ ಮಾಡಿ ಸಂಗ್ರಹಿಸಿದ 1,880 ರೂ. ನಗದು ಹಾಗೂ ಆಮ್ನಿಯನ್ನು ವಶ‌ಪಡಿಸಿಕೊಂಡಿದ್ದಾರೆ.

Advertisement

ಮರಳು ಲಾರಿ ವಶ: ಓರ್ವನ ಬಂಧನ
ಉಡುಪಿ: ಪಡುಅಲೆವೂರಿ ನಲ್ಲಿ ಮಂಗಳವಾರ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಡಿಸಿಐಬಿ ಪೊಲೀಸ್‌ ನಿರೀಕ್ಷಕ ಸಿ. ಕಿರಣ್‌ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ±ಚಾಲಕ ಉಮೇಶ್‌ ಎಂಬಾತನನ್ನು ಬಂಧಿಸಿ ದ್ದಾರೆ. ಮಣಿಪಾಲ ಠಾಣೆೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟ್ಕಾ-ಜುಗಾರಿ: ಆರೋಪಿ ಬಂಧನ
ಉಡುಪಿ: ಹೊಸಾರು ಗ್ರಾಮದ ಭಗತ್‌ ನಗರದ ಸಾರ್ವಜನಿಕ ಸ್ಥಳದ‌ಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಹೊಸಾಡು ಗ್ರಾಮದ ರಾಘವೇಂದ್ರನನ್ನು ಎ. 2ರಂದು ಸೆನ್‌ ಪೊಲೀಸರು ಬಂಧಿಸಿದ್ದಾರೆ. ಈತ ಕೇಶವ ಶೆಟ್ಟಿಗಾರ್‌ ಸೂಚನೆ ಮೇರೆಗೆ ಜುಗಾರಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next