Advertisement

Udupi; ಇಂದ್ರಾಳಿ ರುದ್ರಭೂಮಿಯಲ್ಲಿ ರಷ್ಯಾ ಪ್ರಜೆಯ ಅಂತ್ಯಸಂಸ್ಕಾರ

11:51 PM Feb 28, 2024 | Team Udayavani |

ಉಡುಪಿ: ಮುರುಡೇಶ್ವರದಲ್ಲಿ ಮೃತಪಟ್ಟ ವಿದೇಶಿ ಪ್ರಜೆಯ ಅಂತ್ಯಸಂಸ್ಕಾರವನ್ನು ಇಂದ್ರಾಳಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಬುಧವಾರ ನೆರವೇರಿಸಲಾಯಿತು.

Advertisement

ರಷ್ಯಾದ ಪ್ರವಾಸಿಗ ಅಲೆಗ್ಸಾಂಡರ್ (73) ಫೆ. 22ರಂದು ಭಾರತಕ್ಕೆ ಆಗಮಿಸಿದ್ದು, ಮುರುಡೇಶ್ವರದ ಕಡಲ ಕಿನಾರೆಯಲ್ಲಿ ವಿಹರಿಸುತ್ತಿದ್ದಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದರು.

ಉತ್ತರ ಕನ್ನಡ ಜಿಲ್ಲಾ ಪೊಲೀಸರು ರಷ್ಯಾದಲ್ಲಿದ್ದ ಕುಟುಂಬದವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಕುಟುಂಬಿಕರು ಭಾರತಕ್ಕೆ ಬರಲು ಅಸಹಾಯಕತೆ ವ್ಯಕ್ತಪಡಿಸಿದ್ದಲ್ಲದೆ ಅಲೆಗ್ಸಾಂಡರ್ ಅವರ ಪುತ್ರಿ ದಹನರೂಪದಲ್ಲಿ ಸ್ಥಳೀಯವಾಗಿಯೇ ಅಂತ್ಯಸಂಸ್ಕಾರ ನಡೆಸುವಂತೆ ವಿನಂತಿಸಿದರು.

ಪೊಲೀಸರು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು. ಕುಟುಂಬದ ಸದಸ್ಯರಿಗೆ ವೀಡಿಯೋ ಕರೆಯ ಮೂಲಕ ಅಂತ್ಯಸಂಸ್ಕಾರದ ದೃಶ್ಯ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

ಮುರುಡೇಶ್ವರ ಪೊಲೀಸರು, ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಸಹಕಾರದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಪಿಎಸ್‌ಐ ಶಿವಕುಮಾರ್‌ ಎಸ್‌.ಆರ್‌., ಸಿಬಂದಿ ಮುರಳಿ ಎಂ. ನಾಯ್ಕ, ವಿಜಯ ನಾಯ್ಕ, ಮಂಜು ಮಡಿವಾಳ ಉಪಸ್ಥಿತರಿದ್ದರು. ವಿಕಾಸ್‌ ಶೆಟ್ಟಿ, ಫ್ಲವರ್‌ ವಿಷ್ಣು ನೆರವು ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next