Advertisement

ಉಡುಪಿ ನಗರ: ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣ

10:49 AM Jun 02, 2019 | sudhir |

ಉಡುಪಿ: ನಗರದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ. ಜೂನ್‌ ತಿಂಗಳ ಮೊದಲು ಮಳೆ ಸುರಿಯಬಹುದು ಎಂದು ಎಲ್ಲರ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ.

Advertisement

ಒಂದೆಡೆ ಸಂಘ-ಸಂಸ್ಥೆಗಳು, ವಾರ್ಡ್‌ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಸಾಧ್ಯವಾದಷ್ಟು ನೀರು ವಿತರಿಸುತ್ತಿದ್ದಾರೆ. ಶಾಲೆ, ವಾಣಿಜ್ಯ ಕಟ್ಟಡ, ಉದ್ಯಮ ನೀರಿಲ್ಲದೆ ಸಮಸ್ಯೆ ಎದುರಿಸುತ್ತಿವೆ. ನೀರಿನ ಸಮಸ್ಯೆ ಯಿಂದಾಗಿ ನಗರದಲ್ಲಿ ಸುಮಾರು 15ರಷ್ಟು ಹೊಟೇಲ್ ಬಾಗಿಲು ಮುಚ್ಚಿವೆ. ಸಣ್ಣಪುಟ್ಟ ಹೊಟೇಲ್ಗಳಿಗೆ ದಿನ ವೊಂದಕ್ಕೆ 1 ಸಾವಿರದಿಂದ 1,500 ಲೀ.ನಷ್ಟು ನೀರು ಬೇಕಾಗುತ್ತದೆ. ಆದರೆ ಅಷ್ಟೊಂದು ಪ್ರಮಾಣದಲ್ಲಿ ನೀರು ಲಭ್ಯವಿಲ್ಲದ ಕಾರಣ ಹೊಟೇಲ್ಗಳನ್ನು ಬಂದ್‌ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಹೊಟೇಲ್ ಮಾಲಕರೊಬ್ಬರು.

ನಿಟ್ಟೂರು ವಾರ್ಡ್‌ನಲ್ಲೊಬ್ಬರ ಸಮಾಜ ಸೇವೆ!

ನಿಟ್ಟೂರು ವಾರ್ಡ್‌ ನಿವಾಸಿ ಮಹಾಬಲ ಶೆಟ್ಟಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ವಾರ್ಡ್‌ ನಿವಾಸಿಗಳಿಗೆ ದಿನನಿತ್ಯ 20 ಸಾವಿರ ಲೀ. ನೀರು ಪೂರೈಕೆ ಮಾಡುತ್ತಿದ್ದಾರೆ. ಕಳೆದ 21 ದಿನಗಳಿಂದ ಈ ಕರ್ತವ್ಯವನ್ನು ಅವರು ನಿಭಾಯಿಸುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಆರಂಭವಾದರೆ ರಾತ್ರಿ 12 ಗಂಟೆವರೆಗೂ ಕೆಲವು ಬಾರಿ ರಾತ್ರಿ 2 ಗಂಟೆಯವರೆಗೂ ನೀರು ಪೂರೈಸಿದ್ದೂ ಇದೆ ಎನ್ನುತ್ತಾರೆ ಅವರು. ಇವರ ಮನೆಯಲ್ಲಿರುವ ಕೊಳವೆಬಾವಿಯಿಂದಲೇ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಸಮೀಪದ ಕಕ್ಕುಂಜೆ ವಾರ್ಡ್‌ನವರು ಕೂಡ ಟ್ಯಾಂಕರ್‌ ಮೂಲಕ ಇಲ್ಲಿಂದ ನೀರು ಕೊಂಡೊಯ್ಯುತ್ತಾರೆ.

ನಗರಸಭೆ: ನೀರು ಪೂರೈಕೆ ಮುಂದುವರಿಕೆ

Advertisement

ನಗರವನ್ನು 6 ವಿಭಾಗಗಳನ್ನಾಗಿ ವಿಂಗಡಿಸಿ ಆರು ದಿನಗಳಿಗೊಮ್ಮೆ ಒಂದೊಂದು ವಿಭಾಗಗಳಿಗೆ ನೀರು ಒದಗಿಸುವ ಪ್ರಕ್ರಿಯೆ ನಗರಸಭೆಯಿಂದ ನಡೆಯುತ್ತಿದೆ. ಸದ್ಯಕ್ಕೆ ಸ್ವರ್ಣಾ ನದಿಯಲ್ಲಿ 5ರಿಂದ 6 ದಿನಕ್ಕಾಗುವಷ್ಟು ಮಾತ್ರ ನೀರಿನ ಅಂದಾಜು ಲಭ್ಯತೆ ಇದೆ. ವಾರ ಕಳೆದರೂ ಮಳೆ ಬಾರದೆ ಇದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next