Advertisement

ಭುಜಂಗ ಪಾರ್ಕ್ ಪ್ರಕರಣ: ಉಡುಪಿ ನಗರ ಠಾಣಾ ಎಸ್.ಐ ಅಮಾನತು

01:20 PM Nov 12, 2019 | Team Udayavani |

ಉಡುಪಿ: ಉಡುಪಿಯ ಭುಜಂಗ ಪಾರ್ಕ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಠಾಣಾ ಎಸ್.ಐ ಪದ್ಮನಾಭ ಅವರನ್ನು ನವೆಂಬರ್ 11 ರಿಂದ ಅಮಾನತಿನಲ್ಲಿಡಲಾಗಿದೆ.

Advertisement

ಮೂವರು ಹುಡುಗರು ಒಂದು ಹುಡುಗಿಯೊಂದಿಗೆ ಮಾತನಾಡುತ್ತ ಕುಳಿತಿರುವಾಗ ಏಕಾಏಕಿ ಬಂದ ಕೆಲವರು ಗುರುತು ಚೀಟಿ ಕೇಳಿ ನೈತಿಕ ಪೊಲೀಸ್ ಗಿರಿ ನಡೆಸಿದ್ದರು ಎಂಬ ಆರೋಪದ ಘಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಮಾನತು ಮಾಡಲಾಗಿದೆ. ಈ ಘಟನೆಯ ಸೂಕ್ಷ್ಮತೆ ಅರಿತು ಠಾಣಾಧಿಕಾರಿ ಎಸ್.ಪಿ ನಿಷಾ ಜೇಮ್ಸ್ ಗೆ ತಿಳಿಸಿಲ್ಲವೆಂಬ ಆರೋಪ ಅವರ ಮೇಲಿದೆ.

ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದ್ದು, ಎರಡು ಕಡೆಯಿಂದ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. ಪ್ರಸ್ತುತ ಮಹಿಳಾ ಠಾಣೆಯ ಎಸ್ಐ ಫೆಮಿನಾ ಅವರು ಪ್ರಭಾರಿಯಾಗಿ ಅಧಿಕಾರ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next