Advertisement

ಉಡುಪಿ ಚಿಟ್ಪಾಡಿ: ವೇದವಿತ್‌ ಪ.ಪೂ. ಕಾಲೇಜು ಉದ್ಘಾಟನೆ

09:58 AM Apr 27, 2019 | Team Udayavani |

ಉಡುಪಿ, ಎ. 26: ಹನುಮಾನ್‌ ಚಾರಿಟೇಬಲ್ ಟ್ರಸ್ಟ್‌ ಪ್ರವರ್ತಿಸಿದ ಚಿಟ್ಪಾಡಿಯ ಹನುಮಾನ್‌ ಕಂಪೌಂಡ್‌ನ‌ಲ್ಲಿ ನೂತನವಾಗಿ ಆರಂಭಗೊಂಡಿರುವ ವೇದವಿತ್‌ ಪ.ಪೂ. ಕಾಲೇಜನ್ನು ಶುಕ್ರವಾರ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿದರು.

Advertisement

ವಿದ್ಯಾಸಂಸ್ಥೆಗಳು ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಹೊಂದಿದ್ದು ವಿದ್ಯಾಸಂಸ್ಥೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆ ಸಂಸ್ಕಾರವನ್ನೂ ನೀಡಬೇಕು. ಸರಕಾರದ ಉದ್ಯೋಗ ಸಿಗದಿದ್ದರೂ ಸ್ವಾವಲಂಬನೆಯಿಂದ ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕು ಎಂದವರು ತಿಳಿಸಿದರು.

ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್‌. ಬಲ್ಲಾಳ್‌ ಅವರು, ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದರು. ಪೈ ಇಂಟರ್‌ನ್ಯಾಶನಲ್ ಸಂಸ್ಥೆಯ ನಿರ್ದೇಶಕ ಅಜಿತ್‌ ಕುಮಾರ್‌ ಪೈ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಸಿಂಡಿಕೇಟ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಪ್ರಬಂಧಕಿ ಸುಜಾತಾ ಜಿ. ಗೌರವ ಅತಿಥಿಗಳಾಗಿದ್ದರು.

ಹನುಮಾನ್‌ ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ಪಿ. ವಿಲಾಸ್‌ ನಾಯಕ್‌ ಸ್ವಾಗತಿಸಿ ಪ್ರಸ್ತಾವನೆಗೈದರು. ತ್ರಿಶಾ ಕ್ಲಾಸಸ್‌ನ ಸಂಸ್ಥಾಪಕ ಗೋಪಾಲಕೃಷ್ಣ ಭಟ್ಪ ಉಪಸ್ಥಿತರಿದ್ದರು. ಪಿ.ಗೋಪಾಲಕೃಷ್ಣ ನಾಯಕ್‌ ದಂಪತಿ ಸ್ವಾಮೀಜಿಯವರನ್ನು ಗೌರವಿಸಿದರು.

ಹನುಮಾನ್‌ ಚಾರಿಟೆಬಲ್ ಟ್ರಸ್ಟ್‌ ವತಿಯಿಂದ ನಡೆಯುವ ಕಾಲೇಜಿನ ಶೈಕ್ಷಣಿಕ ಪಾಲುದಾರಿಕೆಯನ್ನು ತ್ರಿಶಾ ಕ್ಲಾಸಸ್‌ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next