Advertisement

Udupi ಕಾರು ಮಾರಾಟ: ವಂಚನೆ; ದೂರು

11:09 PM Jun 03, 2024 | Team Udayavani |

ಉಡುಪಿ: ಕಾರು ಮಾರಾಟದ ನೆಪದಲ್ಲಿ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾದ ಘಟನೆ ನಡೆದಿದೆ. ಪೆರ್ಣಂಕಿಲ ದಂಡೆಮಠ ನಿವಾಸಿ ಕಿಶೋರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ತನ್ನ ಕಾರು ಮಾರಾಟ ಮಾಡುವ ಬಗ್ಗೆ ತಿಳಿಸಿದ್ದರು. ಬಳಿಕ ಮಂಜುನಾಥ ಅವರು ಇದಕ್ಕೆ ಆಸಕ್ತಿ ತೋರಿಸಿದ್ದು, ಮಾತುಕತೆ ನಡೆಸಿ 4,30,000 ರೂ.ಗೆ ಅಂತಿಮವಾಗಿತ್ತು.

Advertisement

ಮುಂಗಡವಾಗಿ 1,30,000 ರೂ. ನೀಡುವಂತೆ ತಿಳಿಸಿದ್ದು, ಆರೋಪಿ ಮಂಜುನಾಥ್‌ 70,000 ರೂ. ನೀಡಿ, ಅನಂತರ ಸಂಪರ್ಕಕ್ಕೆ ಸಿಗಲಿಲ್ಲ. ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next