Advertisement

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರನಿಗೆ ಗಾಯ

12:23 AM Mar 09, 2024 | Team Udayavani |

ಉಡುಪಿ: ಕಾರು ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ಗಾಯಗೊಂಡ ಘಟನೆ ನಡೆದಿದೆ.

Advertisement

ಆರೂರಿನ ರಾಕೇಶ್‌ ಅವರು ಸ್ಕೂಟರ್‌ನಲ್ಲಿ ಜೋಡುಕಟ್ಟೆಯಿಂದ ಬ್ರಹ್ಮಗಿರಿ ಕಡೆಗೆ ತೆರಳುತ್ತಿದ್ದಾಗ ಕಾರಿನ ಚಾಲಕಿ ರಮಿತಾ ಅವರು ತನ್ನ ಕಾರನ್ನು ಬ್ರಹ್ಮಗಿರಿ ಕಡೆಯಿಂದ ಚಲಾಯಿಸಿಕೊಂಡು ಬಂದು ಹುತಾತ್ಮರ ಸ್ಮಾರಕದ ಬಳಿ ಹಠಾತ್‌ ಯು ಟರ್ನ್ ಮಾಡಿದ ಪರಿಣಾಮ ಸ್ಕೂಟರ್‌ ಸವಾರ ಬಿದ್ದು ಗಾಯಗೊಂಡರು.

ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next