Advertisement

Kirimanjeshwara: ಕಾರು-ಟಿಪ್ಪರ್‌ ಢಿಕ್ಕಿ; ಮೂವರಿಗೆ ಗಾಯ, ಓರ್ವ ಗಂಭೀರ

10:45 PM Apr 21, 2024 | Team Udayavani |

ಉಪ್ಪುಂದ: ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಅರೆಹೊಳೆ ಕ್ರಾಸ್‌ನಲ್ಲಿ ಟಿಪ್ಪರ್‌ಗೆ ಕಾರು ಢಿಕ್ಕಿ ಹೊಡೆದು ಕಾರಿನ ಸವಾರರು ಗಂಭೀರ ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ.

Advertisement

ಮೂವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ಇದ್ದವರು ಕುಂದಾಪುರ ದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಕೊಂಡು ಗೋಕರ್ಣಕ್ಕೆ ಹೋಗುತ್ತಿದ್ದಾಗ ಅರೆಹೊಳೆ ಕ್ರಾಸ್‌ ಬಳಿ ಅಪಘಾತ ಸಂಭವಿಸಿತು.

ಕಾರಿನಲ್ಲಿ ಇದ್ದವರು ಬ್ಯಾಂಕ್‌ ಉದ್ಯೋಗಿಗಳು ಎಂದು ತಿಳಿದು ಬಂದಿದೆ. ಪ್ರತಾಪ್‌ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ, ಪ್ರಜ್ವಲ್‌, ಅಂತೋನಿ ಅವರನ್ನು ಉಡುಪಿ ಆಸ್ಪತ್ರೆಗೆ, ವಿಘ್ನೇಶ್ವರ, ಸುರೇಶ್‌ ಅವರನ್ನು
ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿರಿಮಂಜೇಶ್ವರದ 108 ಆ್ಯಂಬುಲೆನ್ಸ್ ಹಾಗೂ ಗಂಗೊಳ್ಳಿಯ 24×7 ಆಪದ್ಬಾಂಧವ ಆ್ಯಂಬುಲೆನ್ಸ್ ನವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next