Advertisement
ಕಳ್ಳರು ಬ್ಯಾಂಕಿನ ಪೂರ್ವ ಬದಿಯ ಕಿಟಕಿಯ 4 ಸರಳುಗಳನ್ನು ತುಂಡು ಮಾಡಿ, ಒಳ ಪ್ರವೇಶಿಸಿ ಒಳಗಿದ್ದ ಗೋದ್ರೇಜ್ ಕಪಾಟು, ಕ್ಯಾಶ್ ಕೌಂಟರ್ನಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿರುವುದು ಕಂಡುಬಂದಿದೆ.
ಮೂಡನಿಡಂಬೂರು ಗ್ರಾಮದ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಕಚೇರಿಯಲ್ಲಿ ಫೆ.23ರಿಂದ ಫೆ.26ರ ನಡುವೆ ಕಳವಿಗೆ ಯತ್ನಿಸಿಲಾಗಿದೆ. ಕಳ್ಳರು ಕಚೇರಿಯ ಕಿಟಕಿಯನ್ನು ಮುರಿದು ಒಳಗೆ ಪ್ರವೇಶಿಸಿ ಡ್ರಾವರ್ ಮತ್ತು ಕಪಾಟನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಎರಡೂ ಪ್ರಕರಣಗಳು ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿವೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.