Advertisement

Udupi: ಗಮನ ಬೆರೆಡೆ ಸೆಳೆದು ಲಕ್ಷಾಂತರ ರೂ. ವಂಚನೆ

09:05 PM Oct 08, 2024 | Team Udayavani |

ಉಡುಪಿ: ಎಟಿಎಂ ಕಾರ್ಡ್‌ ಮೂಲಕ ಹಣ ತೆಗೆಯಲು ಹೋಗಿದ್ದ ಗ್ರಾಹಕರೊಬ್ಬರಿಗೆ ವ್ಯಕ್ತಿಯೊಬ್ಬ ಮಾಹಿತಿ ನೀಡುವ ನೆಪದಲ್ಲಿ ಬ್ಯಾಂಕ್‌ ವಿವರ ಪಡೆದು ಲಕ್ಷಾಂತರ ರೂ. ಹಣ ದೋಚಿಸಿ ಘಟನೆ ನಡೆದಿದೆ.

Advertisement

ಕೆಳಾರ್ಕಳಬೆಟ್ಟುವಿನ ಜಗದೀಶ ರಾವ್‌ ಅವರು ಅ. 6ರಂದು ಸಂತೆಕಟ್ಟೆಯಲ್ಲಿರುವ ಎಸ್‌ ಬಿಐ ಬ್ಯಾಂಕ್‌ ಎಟಿಎಂನಿಂದ ಅವರ ಕೆನರಾ ಬ್ಯಾಂಕ್‌ ಸೇವಿಂಗ್‌ ಖಾತೆಯಿಂದ 10,000 ರೂ. ತೆಗೆದಿದ್ದರು. ಅನಂತರ ಖಾತೆಯ ಸ್ಟೇಟ್‌ಮೆಂಟ್‌ ತೆಗೆಯುತ್ತಿರುವಾಗ ಅವರ ಹಿಂದಿದ್ದ ಓರ್ವ ವ್ಯಕ್ತಿ ಸಹಾಯ ಮಾಡುವಂತೆ ನಟಿಸಿ ಅವರ ಎಟಿಎಂ ಕಾರ್ಡ್‌ ಪಡೆದು, ಬೇರೆ ವಿಧಾನದ ಮೂಲಕ ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾನೆ.

ಜಗದೀಶ್‌ ಅವರು ಮನೆಗೆ ಬಂದಾಗ ಅವರ ಕೆನರಾ ಬ್ಯಾಂಕ್‌ ಖಾತೆಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ ಹಂತ-ಹಂತವಾಗಿ 2,29,998 ರೂ.ಗಳು ಕಡಿತವಾಗಿರುವ ಬಗ್ಗೆ ಸಂದೇಶ ಬಂದಿದೆ. ಕೂಡಲೇ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲಿ ಕೇವಲ 32,192 ರೂ.ಮಾತ್ರ ಇತ್ತು. ಅಪರಿಚಿತ ವ್ಯಕ್ತಿಯು ಜಗದೀಶ್‌ ಅವರ ಗಮನಕ್ಕೆ ಬಾರದೇ ಅವರ ಬ್ಯಾಂಕ್‌ ಖಾತೆಯಿಂದ ಒಟ್ಟು 2,40,000 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next