Advertisement

Couple Retired: ಉಡುಪಿ-ಒಂದೇ ದಿನ ಸೇವಾ ನಿವೃತ್ತಿ ಹೊಂದಿದ ದಂಪತಿ!

10:58 AM Aug 08, 2023 | Team Udayavani |

ಉಡುಪಿ: ಸರಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಒಂದೇ ದಿನ ದಂಪತಿ ನಿವೃತ್ತಿ ಹೊಂದಿದ್ದಾರೆ. ಮಲ್ಪೆಯ ಕರ್ನಾಟಕ ಕರಾವಳಿ ಕಾವಲು ಪೊಲೀಸ್‌ನ ಉಡುಪಿಯ ಕಂಟ್ರೋಲ್‌ ರೂಂನಲ್ಲಿ 6 ವರ್ಷಗಳಿಂದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಹಾಗೂ ಒಟ್ಟು 31ವರ್ಷ 6 ತಿಂಗಳು ಸೇವೆ ಸಲ್ಲಿಸಿ ಜು.31ರಂದು ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಬಿ. ಮನಮೋಹನ ರಾವ್‌ ಮತ್ತು ಅವರ ಪತ್ನಿ ಕಾರ್ಕಳ ವಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿದ್ದು,
ಇಲಾಖೆಯಲ್ಲಿ ಸುಮಾರು 33 ವರ್ಷ 6 ತಿಂಗಳು ಕರ್ತವ್ಯ ನಿರ್ವಹಿಸಿ ಇದೇ ದಿನ ನಿವೃತ್ತರಾದ ಶೋಭಾ ಎನ್‌. ಅವರನ್ನು
ಕರಾವಳಿ ಕಾವಲು ಪೊಲೀಸ್‌ ಘಟಕದ ವತಿಯಿಂದ ಪೊಲೀಸ್‌ ಅಧೀಕ್ಷಕ ಅಬ್ದುಲ್‌ ಅಹದ್‌ ಸಮ್ಮಾನಿಸಿದರು.

Advertisement

ಸಿ.ಎಸ್‌.ಪಿ. ಕಂಟ್ರೋಲ್‌ ರೂಂ, ಸಿ.ಎಸ್‌.ಪಿ. ವಾಹನ ವಿಭಾಗ, ಸಿ.ಎಸ್‌.ಪಿ. ಕಚೇರಿ ಮಲ್ಪೆ, ಉಡುಪಿ ಜಿಲ್ಲಾ ಪೊಲೀಸ್‌ ಕಂಟ್ರೋಲ್‌ ರೂಂ, ಮಂಗಳೂರು ನಗರ ಹಾಗೂ ಜಿಲ್ಲಾ ಕಂಟ್ರೋಲ್‌ ರೂಂ, ಉಡುಪಿ ಹಾಗೂ ದ.ಕ. ಜಿಲ್ಲಾ ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘ, ಕಾರ್ಕಳ ಮತ್ತು ಉಡುಪಿ ರಾಮಕ್ಷತ್ರಿಯ ಸಂಘದ ವತಿಯಿಂದಲೂ ಸಮ್ಮಾನಿಸಲಾಯಿತು. ಸಿ.ಎಸ್‌.ಪಿ. ಕೇಂದ್ರ ಸ್ಥಾನ ಪೊಲೀಸ್‌ ಉಪಾಧೀಕ್ಷಕ ಟಿ.ಎಸ್‌. ಸುಲ್ಪಿ, ಕಂಟ್ರೋಲ್‌ ಇನ್‌ ಸ್ಪೆಕ್ಟರ್‌ ಕರುಣಾಸಾಗರ್‌, ಆರ್‌.ಪಿ.ಐ. ಸೋಮಪ್ಪ ನಾಯ್ಕ್, ಜಿ.ಎಚ್‌.ಎ. ಮಂಜುಳಾ ಗೌಡ, ಕಾರವಾರ ಸಿ.ಎಸ್‌. ಪಿ. ಠಾಣೆಯ ನಿವೃತ್ತ ಪಿ.ಎಸ್‌.ಐ. ಅಶೋಕ್‌, ನಿವೃತ್ತ ದಂಪತಿಯ ಪುತ್ರಿ
ಡಾ| ಸುಮಾ ಉಪಸ್ಥಿತರಿದ್ದರು.‌

ಕಚೇರಿ ಅಧೀಕ್ಷಕಿ ಸುಮಾ, ಕಂಟ್ರೋಲ್‌ ರೂಂ ಎಚ್‌.ಸಿ. ಸಂತೋಷ್‌, ಮಹಿಳಾ ಪಿ.ಎಸ್‌.ಐ. ಸುಜಾತಾ ಸಾಲ್ಯಾನ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಯ ಎಫ್‌.ಡಿ.ಎ. ವಿದ್ಯಾ ಶುಭಕೋರಿದರು. ವಾಹನ ವಿಭಾಗದ ಎ.ಎಸ್‌.ಐ. ಭಾಸ್ಕರ ಶೆಟ್ಟಿಗಾರ್‌ ಸ್ವಾಗತಿಸಿದರು. ಗಣೇಶ್‌ ಸಂಕ್ಷಿಪ್ತ ವಾಚಿಸಿದರು. ಕರುಣಾಸಾಗರ್‌ ವಂದಿಸಿದರು. ಪ್ರಮೋದ್‌ ಕುಮಾರ್‌ ಪಿ. ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next