Advertisement

Uddhav Thackeray ‘ಔರಂಗಜೇಬ ಫ್ಯಾನ್ಸ್‌ ಕ್ಲಬ್‌ ಮುಖ್ಯಸ್ಥ’: ಗೃಹ ಸಚಿವ ಅಮಿತ್‌ ಶಾ

12:31 AM Jul 22, 2024 | Team Udayavani |

ಮುಂಬಯಿ: ಉದ್ಧವ್‌ ಠಾಕ್ರೆ ಔರಂಗಜೇಬ ಅಭಿ ಮಾನಿ ಸಂಘದ ಮುಖ್ಯಸ್ಥ ಹಾಗೂ ಶರದ್‌ ಪವಾರ್‌ ಭ್ರಷ್ಟಾಚಾರಗಳ ನಾಯಕ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟೀಕಾ ಪ್ರಹಾರ ನಡೆಸಿದ್ದಾರೆ. ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಹಂಕಾರ ಪ್ರದರ್ಶಿಸುತ್ತಾರೆ ಎಂದೂ ವ್ಯಂಗ್ಯವಾಡಿದ್ದಾರೆ.

Advertisement

ಪುಣೆಯಲ್ಲಿ ನಡೆದ ಬಿಜೆಪಿ ರಾಜ್ಯ ಸಮಾವೇಶದಲ್ಲಿ ಭಾಗಿಯಾಗಿ ಮಾತ ನಾಡಿ, ಶರದ್‌ ಪವಾರ್‌ ಭ್ರಷ್ಟಾಚಾರಕ್ಕೆ ಸಾಂಸ್ಥಿಕ ರೂಪ ಕೊಟ್ಟರು. ಉದ್ಧವ್‌ ಠಾಕ್ರೆ, ಯಾಕೂಬ್‌ ಮೆನನ್‌ಗೆ ಕ್ಷಮಾದಾನ ಕೇಳಿದವರೊಂದಿಗೆ ಕೂತಿರುವ ಔರಂಗ ಜೇಬ ಅಭಿಮಾನಿಗಳ ಸಂಘದ ಮುಖ್ಯಸ್ಥ ಎಂದಿದ್ದಾರೆ. ಶಾ ಹೇಳಿಕೆಗೆ ಶರದ್‌ ಪಕ್ಷದ ವಕ್ತಾರ, ಆರೋಪಿತನ‌ನ್ನು ಪಕ್ಷಕ್ಕೆ ಸೇರಿಸಿಕೊಂಡು, ಕ್ಲೀನ್‌ಚೀಟ್‌ ಕೊಟ್ಟು ಭ್ರಷ್ಟಾ ಚಾರ ಸಾಂಸ್ಥಿಕಗೊಳಿಸುತ್ತಿರುವುದೇ ಬಿಜೆಪಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next