Advertisement

ಶಿವ ಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ 18 ಸಂಸದರೊಂದಿಗೆ ಭಾನುವಾರ ಅಯೋಧ್ಯೆಗೆ

09:39 AM Jun 18, 2019 | Sathish malya |

ಲಕ್ನೋ : ಶಿವ ಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಇದೇ ಭಾನುವಾರ ಸಂಸತ್ತಿಗೆ ನೂತನವಾಗಿ ಚುನಾಯಿತರಾಗಿರುವ 18 ಶಿವ ಸೇನೆ ಸದಸ್ಯರೊಂದಿಗೆ ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿನ ವಿವಾದಿತ ತಾಣದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಬಗ್ಗೆ ಹೊಸ ಹಕ್ಕೊತ್ತಾಯ ಮಾಡಲಿದ್ದಾರೆ.

Advertisement

ವಿವಾದಿತ ಸ್ಥಳದಲ್ಲಿ ಈಗಿರುವ ತಾತ್ಕಾಲಿಕ ರಾಮ ಲಲ್ಲಾ ಗುಡಿಯಲ್ಲಿ ಠಾಕ್ರೆ ಮತ್ತು ಅವರ ಸಂಗಡಿಗರು ಪೂಜೆ ಸಲ್ಲಿಸುವರು.

ಕಳೆದ ತಿಂಗಳಲ್ಲಿ ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟಗೊಂಡ ಬಳಿಕದಲ್ಲಿ ಉದ್ಧವ್‌ ಠಾಕ್ರೆ ಅಯೋಧ್ಯೆಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next