Advertisement

ಚುನಾವಣಾ ಆಯೋಗ ಮೋದಿಯ ಗುಲಾಮ: ಉದ್ಧವ್‌ ಠಾಕ್ರೆ

05:59 PM Feb 18, 2023 | Team Udayavani |

ಮುಂಬೈ:ಶಿವಸೇನೆಯ ಚಿನ್ಹೆ ಬಿಲ್ಲು ಮತ್ತು ಬಾಣ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದ ಪಾಲಾದ ಬಳಿಕ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಪ್ರಧಾನಿ ಮೋದಿ ವಿರುದ್ಧ ಕೆಂಡ ಕಾರಿದ್ದಾರೆ.

Advertisement

“ಚುನಾವಣಾ ಆಯೋಗ ಮೋದಿ ಅವರ ಗುಲಾಮನಂತೆ ವರ್ತಿಸುತ್ತಿದೆ. ಅದು ಈವರೆಗೆ ಮಾಡದ ಕೆಲಸವನ್ನು ಮಾಡಿಬಿಟ್ಟಿದೆ” ಏಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ತಮ್ಮ ಮೂಲ ಮನೆಯಾದ ಮಾತೋಶ್ರೀಯ ಹೊರಗಡೆ ನಡೆದಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು , ಕಾರ್ಯಕರ್ತರು ಈ ಬಗ್ಗೆ ತಾಳ್ಮೆಯಿಂದಿದ್ದು ಮುಂದಿನ ಬಿಎಂಸಿ ಚುನಾವಣೆಗೆ ಸಿದ್ಧತೆ  ನಡೆಸಿ ಎಂದಿದ್ದಾರೆ.

ತಮ್ಮ ಪಕ್ಷದ ಚಿನ್ಹೆಯನ್ನು ಕದಿಯಲಾಗಿದ್ದು, ಕಳ್ಳರಿಗೆ ತಕ್ಕ ಶಾಸ್ತಿ ಕಲಿಸಬೇಕಾಗಿದೆ ಎಂದು ಉದ್ಧವ್‌ ಠಾಕ್ರೆ ಏಕನಾಥ್‌ ಶಿಂಧೆಯನ್ನು ತಿವಿದಿದ್ದಾರೆ.

ಇದನ್ನೂ ಓದಿ:ಒಮ್ಮೆ ಫಿರಂಗಿಗಳು ಘರ್ಜಿಸಿದರೆ ಪಾಕಿಸ್ಥಾನವು ಭೂಪಟದಿಂದಲೇ ಮಾಯವಾಗುತ್ತದೆ: ಯೋಗಿ ಆದಿತ್ಯನಾಥ್

Advertisement
Advertisement

Udayavani is now on Telegram. Click here to join our channel and stay updated with the latest news.

Next