Advertisement

ಎರಡು ರಾಷ್ತ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಗ್ರೀನ್ ಸಿಗ್ನಲ್ : ಸಂಸದ ಜೊಲ್ಲೆ

05:11 PM Aug 27, 2021 | Team Udayavani |

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

Advertisement

ನಿರಂತರ ಪ್ರಯತ್ನದಿಂದ ಎರಡು ರಾಷ್ಟ್ರೀಯ ಹೆದ್ದಾರಿಗಳ ಮೇಲ್ದರ್ಜೆಗೆ ಏರಿಸಲು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಎಂದರು.

ಇದನ್ನೂ ಓದಿ : ಮೈಸೂರು ಅತ್ಯಾಚಾರ  ಪೊಲೀಸ್, ರಾಜಕಾರಣಿಗಳ ವೈಫಲ್ಯಕ್ಕೆ ಸಾಕ್ಷಿ : ಇಂದ್ರಜಿತ್ ಲಂಕೇಶ್

ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರೊಂದಿಗೆ ನಿರಂತರ ಸಂಪರ್ಕ ಮಾಡುವ ಮೂಲಕ ಮೊದಲ ಹಂತದಲ್ಲಿ  ಬೆಳಗಾವಿಯ ಹೊನಗಾದಿಂದ ಸಂಕೇಶ್ವರ ಬೈ ಪಾಸ್ ವರೆಗೆ ಒಟ್ಟು  1295.44 ಕೋಟಿ ವೆಚ್ಚದ 40 ಕಿಮೀ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ.

ಇನ್ನು ಸಂಕೇಶ್ವರ್ ಬೈಪಾಸ್ ನಿಂದ ಕರ್ನಾಟಕ ಮಹಾರಾಷ್ಟ್ರ ಗಡಿವರೆಗೆ 1223.20 ಕೋಟಿ ರೂ ಅನುದಾನದಲ್ಲಿ  ರಾಷ್ಟ್ರೀಯ ಹೆದ್ದಾರಿ 37 ನ್ನು 6 ಲೈನ್ ಮಾಡಿ  ಮೇಲ್ದರ್ಗೆಗೆ ಏರಿಸಲು ಟೆಂಡರ್ ಕರೆಯಲಾಗಿದೆ.

Advertisement

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಎರಡೂ ರಾಜ್ಯಗಳ ನಡುವೆ ಅಧಿಕ ವಾಹನ ಸಂಚಾರ ಇದ್ದು, ಈ ಭಾಗದಲ್ಲಿ ಸುಗಮ ಸಾರಿಗೆಗಾಗಿ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸುವ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿತ್ತು. ಈಗ ತಮ್ಮ ನಿರಂತರ ಪರಿಶ್ರಮದಿಂದ ಕೇಂದ್ರ ಸರ್ಕಾರ ಎರಡೂ ಯೋಜನೆಗಳಿಗೆ ಅನುಮತಿ ನೀಡಿ ಟೆಂಡರ್ ಕರೆದಿರುವುದು ಸಂತಸದ ವಿಷಯ ಎಂದರು.

ಈ ಯೋಜನೆಗೆ ಅನುಮತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ 3 ಹೊಸ ಗೋದಾಮುಗಳನ್ನು ಆರಂಭಿಸಿದೆ ಫ್ಲಿಪ್ ಕಾರ್ಟ್ : 14 ಸಾವಿರ ಉದ್ಯೋಗ ಸೃಷ್ಟಿ

Advertisement

Udayavani is now on Telegram. Click here to join our channel and stay updated with the latest news.

Next