Advertisement

ಉದಯನಗರ: ಭಾರೀ ಗಾಳಿ ಮಳೆಗೆ ಲಕಾಂತರ ರೂ. ನಷ್ಟ 

12:28 PM Aug 10, 2018 | Team Udayavani |

ಕೊಲ್ಲೂರು : ಜಡ್ಕಲ್‌ ಗ್ರಾ.ಪಂ.ನ ಮುದೂರು ಸಮೀಪದ ಉದಯ ನಗರದಲ್ಲಿ ಆ. 9ರಂದು ಬೆಳಗ್ಗೆ ಬೀಸಿದ ಭಾರೀ ಗಾಳಿ ಮಳೆಗೆ ಇಲ್ಲಿನ 4 ಪ್ರತ್ಯೇಕ ಅಂಗಡಿ ಸಹಿತ ವಿದ್ಯುತ್‌ ಕಂಬಗಳು ಜಖಂಗೊಂಡಿದ್ದು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ನಷ್ಟವಾಗಿವೆ.

Advertisement

ಸುಮಾರು 2 ನಿಮಿಷಗಳ ಕಾಲ ಬೀಸಿದ ಭಾರೀ ಗಾಳಿಗೆ ಇಲ್ಲಿನ ನಿವಾಸಿ ಗಳಾದ ನಿಕ್ಸನ್‌, ಸನ್ನಿ, ಚೆರುದಾನಿ ಸನ್ನಿ, ಸಾಲಿ ಟೈಲರಿಂಗ್‌, ಮನೋಜ್‌ ಪಿ.ವಿ., ಜಾಯ್‌, ಪುರುಷೋತ್ತಮ ಅವರ ಮನೆ ಸಹಿತ ಅಂಗಡಿಯ ಮೇಲ್ಛಾವಣಿಯ ಆರ್‌ಸಿಸಿ ಶೀಟುಗಳು ಹಾರಿ ಹೋಗಿದ್ದು ಅಪಾರ ನಷ್ಟ ಸಂಭವಿಸಿದೆ.

ಭಾರೀ ಶಬ್ದ
ಕಳೆದ 1 ವಾರದಿಂದ ಜಡ್ಕಲ್‌, ಮುದೂರು, ಉದಯ ನಗರ, ಸಳ್ಕೋಡು ಪರಿಸರದಲ್ಲಿ ನಿರಂತರ ಮಳೆಯಾಗುತ್ತಿದ್ದು ಗುರುವಾರದಂದು ಏಕಾಏಕಿ ಒಂದು ಪಾರ್ಶ್ವದಿಂದ ಬೀಸಿದ ಗಾಳಿಯು ಆ ಭಾಗದ ಮನೆ ಸಹಿತ ಅಂಗಡಿಗಳಿಗೆ ಭಾರೀ ಹಾನಿ ಉಂಟಾಯಿತು.

ಗ್ರಾ.ಪಂ. ಅಧ್ಯಕ್ಷರ ಭೇಟಿ
ಜಡ್ಕಲ್‌ ಗ್ರಾ.ಪಂ. ಅಧ್ಯಕ್ಷ ಅನಂತಮೂರ್ತಿ ಸಹಿತ ಇಲಾಖೆಯ ಅಧಿಕಾರಿಗಳು ಪೊಲೀಸ್‌ ಇಲಾಖೆಯವರು ಸ್ಥಳಕ್ಕೆ ಭೇಟಿ ಇತ್ತು ಘಟನೆಯಿಂದ ಉಂಟಾದ ನಷ್ಟದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next