Advertisement

ರಾಜಸ್ಥಾನದಲ್ಲಿ 6 ಗೂಂಡಾಗಳಿಂದ ವಧುವಿನ ಅಪಹರಣ; ವರನ ಮೇಲೆ ಹಲ್ಲೆ

10:06 AM May 08, 2019 | Team Udayavani |

ಉದಯಪುರ : ರಾಜಸ್ಥಾನದಲ್ಲಿ ನಡೆದಿರುವ  ವಧು ಅಪಹರಣದ ಇನ್ನೊಂದು ಆಘಾತಕಾರಿ ಪ್ರಕರಣದಲ್ಲಿ ಇಂದು ಮಂಗಳವಾರ ಕನಿಷ್ಠ ಆರು ಗೂಂಡಾಗಳು ವಧು-ವರ ಇದ್ದ ಕಾರಿಗೆ ತಮ್ಮ ಕಾರನ್ನು ಅಡ್ಡ ಇರಿಸಿ ವರನನ್ನು ಹೊರಗೆಳೆದು ಹೊಡೆದು ಗಾಯಗೊಳಿಸಿ ವಧುವನ್ನು ಅಪಹರಣ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಉದಯಪುರದ ಸವೀನಾ ದಿಂದ ಈ ಘಟನೆ ವರದಿಯಾಗಿದೆ. ನೂತನ ದಂಪತಿ ಕಾರಿನಲ್ಲಿ ವರನ ಮನೆಗೆ ಹೋಗುತ್ತಿದ್ದಾಗ ನಡು ರಸ್ತೆಯಲ್ಲಿ ಗೂಂಡಾಗಳಿಂದ ಈ ದುಷ್ಕೃತ್ಯ ನಡೆದಿದೆ.

ಪೊಲೀಸರು ಎಲ್ಲ ಚೆಕ್‌ ಪಾಯಿಂಟ್‌ಗಳಿಗೆ ಮಾಹಿತಿ ನೀಡಿದ್ದು ಅಪಹರಣಕಾರ ಗೂಂಡಾಗಳನ್ನು ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ಕೈಗೊಂಡಿದ್ದಾರೆ.

ಕೆಲ ತಿಂಗಳ ಹಿಂದೆ ಉದಯಪುರದಿಂದ 400 ಕಿ.ಮೀ. ದೂರದ ಸಿಕಾರ್‌ ನಲ್ಲಿ ವಧುವನ್ನು ಗೂಂಡಾಗಳು ಅಪಹರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next