Advertisement

ವಿಪಕ್ಷಗಳ ತೀವ್ರ ವಿರೋಧದ ನಡುವೆ UAPA ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

08:45 AM Jul 25, 2019 | Nagendra Trasi |

ನವದೆಹಲಿ:ಪ್ರತಿಪಕ್ಷಗಳ ವಿರೋಧದ ನಡುವೆಯೂ ಭಯೋತ್ಪಾದನಾ ನಿಗ್ರಹ ಕಾಯ್ದೆಯ ತಿದ್ದುಪಡಿಯನ್ನು ಬಲವಾಗಿ ಸಮರ್ಥಿಸಿಕೊಂಡ ಗೃಹ ಸಚಿವ ಅಮಿತ್ ಶಾ, ನಮ್ಮ ದೇಶದ ಕಾನೂನು ಸಂಸ್ಥೆ ಉಗ್ರರಿಗಿಂತ ಒಂದು ಹೆಜ್ಜೆ ಮುಂದಿರಬೇಕು ಎಂದು ಹೇಳಿದರು.

Advertisement

ಬುಧವಾರ ಲೋಕಸಭೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ(ನಿಯಂತ್ರಣ-ಯುಸಿಪಿಎ) ಕಾಯ್ದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಾಗ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿದ್ದರು.

ಕಾನೂನು ಬಾಹಿರ ಚಟುವಟಿಕೆ(ನಿಗ್ರಹ) ತಿದ್ದುಪಡಿ ಕಾಯ್ದೆ ಮಸೂದೆ 2019 ಲೋಕಸಭೆಯಲ್ಲಿ ಮಂಡಿಸಿದ್ದು, ಮಸೂದೆ ಪರ 278 ಸದಸ್ಯರು ಹಾಗೂ ವಿರುದ್ಧ 8 ಮಂದಿ ಸಂಸದರು ಮತ ಚಲಾಯಿಸಿದ್ದರು.

ಈ ಕಾಯ್ದೆಯಿಂದ ಉಗ್ರರ ಜತೆ ಸಂಬಂಧ ಹೊಂದಿರುವ ಶಂಕೆಯ ಮೇಲೆ ಕ್ರಮ ಕೈಗೊಳ್ಳಬಹುದಾಗಿದ್ದು, ಭಯೋತ್ಪಾದಕರು ಭಯೋತ್ಪಾದನೆಯಿಂದ ಕೊನೆಗಾಣಿಸಬೇಕೆಂಬುದೇ ಕಾಯ್ದೆಯ ಉದ್ದೇಶವಾಗಿದೆ ಎಂದು ಶಾ ಲೋಕಸಭೆಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next