Advertisement

ವಿಟ್ಲದಲ್ಲಿ ಉಸ್ತುವಾರಿ ಸಚಿವರ ಬಾಲ್ಯದ ನೆನಪುಗಳ ಮೆಲುಕು!

10:10 AM Jun 18, 2019 | Team Udayavani |

ವಿಟ್ಲ: ರಾಜ್ಯ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಸೋಮವಾರ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ವಿಟ್ಲ ಪೇಟೆಯಲ್ಲಿ ಸುತ್ತಾಡಿ, ಬಾಲ್ಯದ ನೆನಪುಗಳ ಮೆಲುಕು ಹಾಕಿದರು.

Advertisement

ನಾಲ್ಕು ಮಾರ್ಗ ಜಂಕ್ಷನ್‌ ಬಳಿಯ ಶೆಣೈ ಕೋಲ್ಡ್‌ ಹೌಸಿಗೆ ತೆರಳಿದ ಸಚಿವರು ಅಲ್ಲಿ ತುಳಸೀದಾಸ್‌ ಶೆಣೈ ಅವರು ಮಾಡಿಕೊಟ್ಟ ಸೋಡಾ ಶರಬತ್‌ ಕುಡಿಯುತ್ತ ಎಲ್ಲರ ಜತೆ ಹರಟೆ ಹೊಡೆದರು. ತನ್ನ ಅತ್ತೆಯ ಮಕ್ಕಳ ದಿನಸಿ ಅಂಗಡಿ ಹೋನೆಸ್ಟ್‌ ಟ್ರೇಡರ್ಸ್‌ಗೂ ಅವರು ಭೇಟಿ ನೀಡಿದರು. ವಿಟ್ಲದ ಮುಖ್ಯ ಬೀದಿಗಳಲ್ಲಿ ನಡೆದಾಡಿದರು.

ಜಿಲ್ಲಾ ವಕ್ಫ್ ಸಮಿತಿ ಸದಸ್ಯ ರಶೀದ್‌ ವಿಟ್ಲ, ಶೆಣೆ„ ಕೋಲ್ಡ್‌ ಹೌಸಿನ ಗೋಕುಲ್‌ದಾಸ್‌ ಶೆಣೈ, ಮನ್ಸೂರ್‌ ಹೋನೆಸ್ಟ್‌, ಇಕ್ಬಾಲ್‌ ಹೋನೆಸ್ಟ್‌, ಮಕೂºಲ್‌ ಹೋನೆಸ್ಟ್‌, ಇಸ್ಮಾಯಿಲ್‌ ಹಾಜಿ ಬದ್ರಿಯಾ, ಅಬೂಬಕರ್‌ ಅನಿಲಕಟ್ಟೆ, ಹಾರಿಸ್‌ ಕಾನತ್ತಡ್ಕ, ಯು.ಟಿ. ತೌಸೀಫ್‌, ಹಾರಿಸ್‌ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next