Advertisement

Bengaluru: ಕೆಲಸ ಸಿಗದೇ ಬೈಕ್‌ ಕಳ್ಳತನಕ್ಕಿಳಿದ ಇಬ್ಬರು ಬಿ-ಟೆಕ್‌ ಪದವೀಧರರು

01:17 PM Aug 12, 2023 | Team Udayavani |

ಬೆಂಗಳೂರು: ಕೆಲಸ ಸಿಗದೇ ಬೈಕ್‌ ಕಳ್ಳತನಕ್ಕೆ ಇಳಿದ ಬಿ-ಟೆಕ್‌ ಪದವೀಧರರನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಆಂಧ್ರದ ಬಾಲಯ್ಯಪಲ್ಲಿ ಮೂಲದ ಹೇಮಾದ್ರಿ ಹಾಗೂ ಪವನ್‌ ಬಂಧಿತರು. ಇಬ್ಬರು ಜೊತೆಗೆ ಓದಿ ಬೆಳೆದಿದ್ದರು. ಬಿ-ಟೆಕ್‌ ಪದವಿ ಮುಗಿಸಿದ್ದ ಇಬ್ಬರು ನಂತರ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಹುಟ್ಟೂರಿನಲ್ಲಿರುವ ಹಲವರಿಗೆ ಒಳ್ಳೆ ಕೆಲಸ ಸಿಕ್ಕಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಆದರೆ, ಬೆಂಗಳೂರಿನಲ್ಲಿ ಕೆಲಸ ಸಿಗದೆ ಪರದಾಡಿದ್ದರು. ಕೆಲಸವಿಲ್ಲ ಎಂದು ಗೊತ್ತಾದರೆ ಹುಟ್ಟೂರಿನಲ್ಲಿ ತಮ್ಮ ಬಗ್ಗೆ ಎಲ್ಲರೂ ಅಪಹಾಸ್ಯ ಮಾಡುತ್ತಾರೆ ಎಂದುಕೊಂಡು ಕಳ್ಳತನದ ಹಾದಿ ಹಿಡಿದಿದ್ದರು.

ಯೂ ಟ್ಯೂಬ್‌ ನೋಡಿ ಬೈಕ್‌ ಕಳ್ಳತನ: ಯೂ ಟ್ಯೂಬ್‌ನಲ್ಲಿ ಬೈಕ್‌ ಕದಿಯುವುದನ್ನು ನೋಡಿ ಬೈಕ್‌ ಕಳ್ಳತನ ಕರಗತ ಮಾಡಿಕೊಂಡಿದ್ದರು. ಬೆಂಗಳೂರಿನ ಹನುಮಂತನಗರ ಠಾಣಾ ವ್ಯಾಪ್ತಿಯ ಬುಲೆಟ್‌ ಬೈಕ್‌ಗಳನ್ನ ಕದ್ದಿದ್ದ ಆರೋಪಿಗಳು ಆಂಧ್ರದಲ್ಲಿರುವ ತಮ್ಮ ಊರಿಗೆ ತೆಗೆದುಕೊಂಡು ಹೋಗಿ ಒಳ್ಳೆಯ ಉದ್ಯೋಗದಲ್ಲಿರುವವರಂತೆ ಬಿಂಬಿಸಿಕೊಂಡಿದ್ದರು. ಇತ್ತ ಬುಲೆಟ್‌ ಮಾಲೀಕರು ಹನುಮತಂನಗರ ಠಾಣೆಗೆ ದೂರು ನೀಡಿದ್ದರು. ಹನು ಮಂತನಗರ ಪೊಲೀಸರು ಆಂಧ್ರಪ್ರದೇ ಶಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದು ಬಂಧಿಸಿದ್ದಾರೆ.

ಇದನ್ನೂ ಓದಿ: Crime: 25 ಲಕ್ಷ ಗೆದ್ದಿದ್ದ ಟೀ ವ್ಯಾಪಾರಿಯನ್ನು ಅಪಹರಿಸಿ 15 ಲಕ್ಷ ಸುಲಿಗೆ ಮಾಡಿದ ಪರಿಚಿತರು

Advertisement

Udayavani is now on Telegram. Click here to join our channel and stay updated with the latest news.

Next