Advertisement

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

01:29 PM Sep 19, 2024 | Team Udayavani |

ಕಾನಾಹೊಸಹಳ್ಳಿ/ ವಿಜಯನಗರ: ಲಾರಿ ಹರಿದು ಇಬ್ಬರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಠಾಣಾ ವ್ಯಾಪ್ತಿಯ ಗಡಿಗ್ರಾಮ ಆಲೂರು ಕ್ರಾಸ್ ಸಮೀಪ ಸೆ.18ರ ಬುಧವಾರ ರಾತ್ರಿ ನಡೆದಿದೆ.

Advertisement

ಸಿದ್ಧಲಿಂಗಸ್ವಾಮಿ (39) ಮೃತಪಟ್ಟಿದ್ದು, ಗಾಯಾಳು ಕೊಟ್ರಯ್ಯ (26) ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಶಿವಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂವರು ಯುವಕರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ರಾಜಸ್ಥಾನದ ಕಡೆ ಹೊರಟಿದ್ದ ಲಾರಿ ಏಕಾಏಕಿ ಯುವಕರ ಮೇಲೆ ಹರಿದಿದ್ದು ಕೂಡಲೇ ಅವರನ್ನು ಹೆದ್ದಾರಿ ಸಹಾಯಕರ ಮೂಲಕ ಟೋಲ್ ಅಂಬುಲೈನ್ಸ್ ನಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಒಬ್ಬರು ಅದಾಗಲೇ ಮೃತಪಟ್ಟಿದ್ದು, ಮಾರ್ಗ ಮಧ್ಯೆ ಇನ್ನೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರ ಸಂಬಂಧಿ ನಾಗಯ್ಯ ನೀಡಿದ ದೂರಿನಂತೆ ಕಾನಾಹೊಸಹಳ್ಳಿ ಠಾಣೆಯಲ್ಲಿ ಸೆ.19ರ ಗುರುವಾರ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next