Advertisement

Terdal: ಮದುವೆ ಸಂಭ್ರಮ ಕಸಿದುಕೊಂಡ ಜವರಾಯ: ಹೈಟೆನ್ಶನ್ ವೈರ್ ತುಂಡಾಗಿ ಇಬ್ಬರು ಮೃತ

06:34 PM Jun 25, 2024 | Team Udayavani |

ಬಾಗಲಕೋಟೆ: ಹೈಟೆನ್ಶನ್ ವಿದ್ಯುತ್ ವೈರ್ ತುಂಡಾಗಿ ತಗಡಿನ ಶೆಡ್ ಮೇಲೆ ಬಿದ್ದು ವಿದ್ಯುತ್ ಪ್ರವಹಿಸಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ತೇರದಾಳ ಪಟ್ಟಣದ ದಾಸರಮಡ್ಡಿಯಲ್ಲಿ ಮಂಗಳವಾರ ನಡೆದಿದೆ.

Advertisement

ಸಂತೋಷ ಸುಣಗಾರ (22) ಹಾಗೂ ಶೋಭಾ ಹುಲ್ಲೆಣ್ಣವ (38) ಮೃತ ದುರ್ದೈವಿಗಳು.

ಅವಘಡದಲ್ಲಿ ಶ್ರೀಕಾಂತ, ಮಹೇಶ, ಕಸ್ತೂರಿ, ಸಂಗೀತಾ ಕಾಮಶೆಟ್ಟಿ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಸರಮಡ್ಡಿಯಲ್ಲಿ ದುರ್ಗಾದೇವಿ ಜಾತ್ರೆಯಿರುವ ಹಿನ್ನೆಲೆ‌ ಮನೆಯಲ್ಲಿ ಹೆಚ್ಚಿನ ಜನರು ಉಳಿದುಕೊಂಡಿದ್ದರು. ಮೃತ ಯುವಕನಿಗೆ ಇನ್ನೂ ಮೂರು ದಿನದಲ್ಲಿ‌ಮದುವೆ ನಿಶ್ಚಯವಾಗಿತ್ತು. ಆದರೆ ಜವರಾಯನ ಅಟ್ಟಾಹಾಸಕ್ಕೆ ಬಲಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next