Advertisement

ಲಡಾಕ್‌: ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಯೋಧರಿಬ್ಬರು ಹುತಾತ್ಮ

09:54 AM Apr 07, 2017 | Team Udayavani |

ಶ್ರೀನಗರ: ಲಡಾಕ್‌ನ ಬಟಾಲಿಕ್‌ ಸೆಕ್ಟರ್‌ನಲ್ಲಿನ ಸೇನಾ ಶಿಬಿರ ದ ಹಿಮಪಾತ ಸಂಭವಿಸಿದ ವೇಳೆ  ನಾಪತ್ತೆಯಾಗಿದ್ದ ಮೂವರು ಯೋಧರ ಪೈಕಿ ಇಬ್ಬರು ಹುತಾತ್ಮರಾಗಿದ್ದಾರೆ.ಇನ್ನೋರ್ವ ಸೈನಿಕನಿಗಾಗಿ ವಿಶೇಷ ರಕ್ಷಣಾ ಪಡೆಗಳು ಹುಡುಕಾಟ ಮುಂದುವರಿಸಿವೆ.

Advertisement

ಶಿಬಿರದಲ್ಲಿ  ನಾಪತ್ತೆಯಾಗಿದ್ದ  ಐದು ಸೈನಿಕರ ಪೈಕಿ ಇಬ್ಬರನ್ನು ರಕ್ಷಿಸಲಾಗಿತ್ತು.ಅನಿರೀಕ್ಷಿತ ಹಿಮ ವರ್ಷ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಇದೇ ವೇಳೆ ಕಾರ್ಗಿಲ್‌ ಹಾಗೂ ಜಮ್ಮು  ಮತ್ತು ಕಾಶ್ಮೀರ ಪ್ರಾಂತ್ಯಗಳಲ್ಲಿ ತೀವ್ರ ರೀತಿಯ ಅಪಾಯದ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. “”ಬರಾಮುಲ್ಲಾ, ಕುಪ್ವಾರ ಮತ್ತು ಬಂಡಿಪೋರ ಜಿಲ್ಲೆಗಳ ಇಳಿಜಾರು ಪ್ರದೇಶಗಳಲ್ಲಿ ಅಪಾಯದ ಮುನ್ನೆಚ್ಚರಿಕೆ ನೀಡಲಾಗಿದೆ,” ಎಂದು ಟ್ವೀಟ್‌ನಲ್ಲಿ  ಎಚ್ಚರಿಸಲಾಗಿದೆ.

ಧಾರಾಕಾರ ಮಳೆ
ಜಮ್ಮು ಕಾಶ್ಮೀರದಲ್ಲಿ ಕಳೆದ 3 ದಿನ ಗಳಿಂದ ಹಿಮವರ್ಷ ಹಾಗೂ ಧಾರಾ ಕಾರ ಮಳೆಯಾಗು ತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ಜೇಲಂ ಹಾಗೂ ಥಾವಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಾ ಯದ ಮಟ್ಟ ತಲುಪುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮಧ್ಯ ಹಾಗೂ ದಕ್ಷಿಣ ಕಾಶ್ಮೀರದಲ್ಲಿ ಪ್ರವಾಹದ ಎಚ್ಚರಿಕೆಯನ್ನೂ ಹೊರಡಿಸಿದೆ. ಕೊಕೆರ್‌ನಾಗ್‌ನಲ್ಲಿ ಕಾರೊಂದು ಸ್ಕಿಡ್‌ ಆಗಿ ನದಿಗೆ ಬಿದ್ದ ಪರಿಣಾಮ ಇಬ್ಬರು ನಾಪತ್ತೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next