Advertisement

ಇನ್ನೂ ಎರಡು ದಿನ ಉಚಿತ ಬಸ್‌

01:18 AM May 05, 2020 | Team Udayavani |

ಬೆಂಗಳೂರು: ವಲಸೆ ಕಾರ್ಮಿಕರು ತವರಿಗೆ ತೆರಳಲು ಘೋಷಿಸಲಾಗಿದ್ದ 3 ದಿನಗಳ ಉಚಿತ ಬಸ್‌ ಸೇವೆಯನ್ನು ಸರಕಾರ ಇನ್ನೂ ಎರಡು ದಿನ ವಿಸ್ತರಿಸಿದೆ.

Advertisement

ಬಸ್‌ ನಿಲ್ದಾಣಗಳಲ್ಲಿ ದಟ್ಟಣೆ ಹೆಚ್ಚಾಗಿ ನೂಕುನುಗ್ಗಲು ಉಂಟಾದ ಕಾರಣ ಮತ್ತು ಇನ್ನೂ ಸಾಕಷ್ಟು ಕಾರ್ಮಿಕರು ತವರಿಗೆ ತೆರಳಬೇಕಾಗಿರುವುದರಿಂದ ಗುರುವಾರದ ವರೆಗೆ ಉಚಿತ ಬಸ್‌ ಸೇವೆ ಮುಂದುವರಿಸಲು ತೀರ್ಮಾನಿಸಲಾಗಿದೆ.

ರವಿವಾರ 951 ಕೆಎಸ್ಸಾರ್ಟಿಸಿ ಬಸ್‌ಗಳನ್ನು ಒದಗಿಸಲಾಗಿತ್ತು. ಸೋಮವಾರ ಬೆಳಗ್ಗೆ 50 ಬಸ್‌ ತೆರಳಿವೆ.ರವಿವಾರ ಎರಡು ರೈಲುಗಳು ಬಿಹಾರದ ಪಾಟ್ನಾ, ಝಾರ್ಖಂಡ್‌ನ‌ ರಾಂಚಿಗೆ ತೆರಳಿವೆ. ಒಡಿಶಾದ ಭುವನೇಶ್ವರಕ್ಕೆ ಒಂದು ರೈಲು ಸೇರಿ ಒಟ್ಟು ನಾಲ್ಕು ರೈಲುಗಳು ಸಂಚರಿಸಿವೆ. ಸೋಮವಾರ ಎರಡು ರೈಲುಗಳು ರಾಜಸ್ಥಾನದ ಜೈಪುರ ಮತ್ತು ಬಿಹಾರದ ಪಾಟ್ನಾಕ್ಕೆ ಪ್ರಯಾಣ ಬೆಳೆಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next