Advertisement

ಏಕಾಏಕಿ ತುಂಬಿ ಹರಿದ ನದಿ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

01:37 PM Sep 21, 2020 | keerthan |

ರಾಣೆಬೆನ್ನೂರು (ಹಾವೇರಿ): ತುಂಗಭದ್ರಾ ನದಿಯಲ್ಲಿ ಇಬ್ಬರು ಯುವಕರು ಹಾಗೂ ಚಕ್ಕಡಿ ಸಮೇತ ಎರಡು ಎತ್ತುಗಳು ಕೊಚ್ಚಿ ಹೋದ ಘಟನೆ ಸೋಮವಾರ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ನಡೆದಿದೆ.

Advertisement

ಪ್ರಾಥಮಿಕ ವರದಿಯ ಪ್ರಕಾರ ತಾಲೂಕಿನ ಅರೇಮಲ್ಲಾಪೂರ ಗ್ರಾಮದ ಜಗಪ್ಪ ಮತ್ತು ಬೆಟ್ಟಪ್ಪ ನದಿಯಲ್ಲಿ ಕೊಚ್ಚಿ ಹೋದ ಯುವಕರು ಎನ್ನಲಾಗುತ್ತಿದೆ.

ಎತ್ತಿನ ಬಂಡಿ ತೆಗೆದುಕೊಂಡು ನದಿಯಲ್ಲಿ ಮರಳು ತುಂಬಲು ಹೋದಾಗ ಏಕಾಏಕಿ ನದಿ ನೀರು ರಭಸವಾಗಿ ಹರಿದು ಬಂದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ: ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Advertisement

ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next