Advertisement

ಎರಡು ಲಕ್ಷ ಮೌಲ್ಯದ ಚಿನ್ನ ವಶ-ಬಂಧನ

03:40 PM Jun 09, 2022 | Team Udayavani |

ಸುರಪುರ/ಹುಣಸಗಿ: ಹುಣಸಗಿ ಮತ್ತು ಕ್ಯಾಂಪ್‌ ಸೇರಿದಂತೆ ಇತರೆಡೆ ಕಳ್ಳತನ ಮಡುತ್ತಿದ್ದ ಕಳ್ಳರನ್ನು ಬಂಧಿಸಲಾಗಿದ್ದು, ಅಂದಾಜು ಎರಡು ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳ್ಳರಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ತಿಳಿಸಿದರು.

Advertisement

ನಗರದ ಪೊಲೀಸ್‌ ಠಾಣೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳ ಹಿಂದೆ ಹುಣಸಗಿ ಪಟ್ಟಣ ಮತ್ತು ಕ್ಯಾಂಪ್‌ನಲ್ಲಿ ರಾತ್ರಿ ಹೊತ್ತು ಮನೆ ಕಳ್ಳತನ ಆಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದವು. ಹುಣಸಗಿ ಪಿಐ ಎನ್‌.ಕೆ. ದೌಲತ್‌ ನೇತೃತ್ವದಲ್ಲಿ ಕಳ್ಳರ ಪತ್ತೆಗಾಗಿ ತಂಡ ರಚಿಸಲಾಗಿತ್ತು. ಕಳ್ಳರನ್ನು ಪತ್ತೆ ಹಚ್ಚುವಲ್ಲಿ ತಂಡ ಯಶಸ್ವಿಯಾಗಿದೆ. ಹುಣಸಗಿ ಪಟ್ಟಣದ ಪಾನ್‌ ಅಂಗಡಿ ವ್ಯಾಪಾರಿ ಜಾಕೀರ್‌ ನಾಸೀರುದ್ದೀನ್‌ ಮಂಡೀಪೀರ ಮತ್ತು ಬಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೂರು ಜನ ಸೇರಿ ಹುಣಸಗಿ ಪಟ್ಟಣ ಮತ್ತು ಕ್ಯಾಂಪ್‌ನಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರಿಸಿಕೊಂಡಿರುವ ಒಬ್ಬ ಕಳ್ಳನ ಪತ್ತೆ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು.

ಹುಣಸಗಿ ಪಿಎಸ್‌ಐ ಚಿದಾನಂದ ಸೌದಿ, ಎಎಸ್‌ಐ ಮೋನಪ್ಪ, ಎಚ್‌.ಸಿ. ಮಲ್ಲಪ್ಪ, ಸಿಬ್ಬಂದಿ ವೀರೇಂದ್ರ, ನಿಂಗಪ್ಪ ತಂಡದಲ್ಲಿದ್ದರು. ಕಳ್ಳರ ಪತ್ತೆ ತಂಡದ ಕಾರ್ಯ ಪ್ರಶಂಸಿಸಿ ಎಸ್ಪಿಯವರು ತಂಡಕ್ಕೆ ಬಹುಮಾನ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next