Advertisement

ಪುಣೆ ಕೊಳೆಗೇರಿಯಲ್ಲಿ ಅಗ್ನಿ ದುರಂತ: ಇಬ್ಬರ ದಾರುಣ ಸಾವು

12:23 PM Oct 25, 2018 | Team Udayavani |

ಪುಣೆ, ಮಹಾರಾಷ್ಟ್ರ : ಇಲ್ಲಿನ ಕೊಳೇಗೇರಿಯೊಂದರಲ್ಲಿ ಇಂದು ಗುರುವಾರ ನಸುಕಿನ ವೇಳೆ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

Advertisement

ನಗರ ಹೊರವಲಯದ ಪಿಂಪ್ರಿ ಚಿಂಚವಾಡ ಪ್ರದೇಶದಲ್ಲಿನ ದಳವಿನಗರದಲ್ಲಿರುವ ಈ ಕೊಳೆಗೇರಿಯ ಗುಡಿಸಲೊಂದರಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡದ್ದೇ ಅಗ್ನಿ ಅನಾಹುತಕ್ಕೆ ಕಾರಣವಾಯಿತು. ಪರಿಣಾಮವಾಗಿ ಬೆಂಕಿಯ ಜ್ವಾಲೆಗಳು ಕ್ಷಣಾರ್ಧದಲ್ಲಿ  ಅಕ್ಕಪಕ್ಕದ ಇತರ ಐದು ಗುಡಿಸಲುಗಳಿಗೂ ಹಬ್ಬಿಕೊಂಡವು. 

ದುರಂತದಲ್ಲಿ ಮೃತಪಟ್ಟಿರುವ ಇಬ್ಬರನ್ನು ಪ್ರದೀಪ್‌ ಮೋಟೆ (38) ಮತ್ತು ಶಂಕರ ಕ್ಷೀರಸಾಗರ್‌ (35) ಎಂದು ಗುರುತಿಸಲಾಗಿದೆ. 

ಅಗ್ನಿ ದುರಂತದ ಸುದ್ದಿ ತಿಳಿದೊಡನೆಯೇ ಅಗ್ನಿ ಶಾಮಕಗಳು ಧಾವಿಸಿ ಬಂದು ಬೆಂಕಿ ನಂದಿಸಿವೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next