Advertisement

India- China; ಭಾರತದ ಪತ್ರಕರ್ತರಿಗೆ ಚೀನ ವೀಸಾ ರದ್ದು

10:40 PM Apr 05, 2023 | Team Udayavani |

ಬೀಜಿಂಗ್‌: ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದ ಚೀನಾ, ಈಗ ಹೊಸರೀತಿಯಲ್ಲಿ ಉದ್ಧಟತನ ಮುಂದುವರಿಸಿದೆ. ಬೀಜಿಂಗ್‌ನಲ್ಲಿನ ಭಾರತೀಯ ಮೂಲದ ಪತ್ರಕರ್ತರ ವೀಸಾವನ್ನು ಸ್ಥಗಿತಗೊಳಿಸಿದೆ. ಈ ಕ್ರಮವನ್ನು ಭಾರತ ಸರ್ಕಾರ ಚೀನಿ ಪತ್ರಕರ್ತರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಪತ್ರಿಕ್ರಿಯೆ ಎಂದು ಬಣ್ಣಿಸಿದೆ.

Advertisement

“ದಿ ಹಿಂದೂ’ ಪತ್ರಿಕೆಯ ಬೀಜಿಂಗ್‌ ವರದಿಗಾರ ಅನಂತಕೃಷ್ಣ, ಪ್ರಸಾರ ಭಾರತಿ ಪ್ರತಿನಿಧಿ ಅಂಶುಮಾನ್‌ ಮಿಶ್ರಾ ಅವರ ವೀಸಾಗಳನ್ನು ಚೀನ ಸ್ಥಗಿತಗೊಳಿಸಿದೆ. “ಪಿಟಿಐ’, “ಹಿಂದೂಸ್ಥಾನ್‌ ಟೈಮ್ಸ್‌’ ಪತ್ರಿಕೆಯ ವರದಿಗಾರರಿಗೂ ಇದೇ ಕ್ರಮ ಅನುಸರಿಸುವುದಾಗಿ ತಿಳಿಸಿದೆ.

ಭಾರತದಲ್ಲಿ ಚೀನ ಪತ್ರಕರ್ತರನ್ನು ವಾಪಸ್‌ ಕಳುಹಿಸಲಾಗಿದೆ. ತನ್ನ ಪತ್ರಕರ್ತರ ವೀಸಾ ಅವಧಿ ವಿಸ್ತರಣೆಯಾಗುವವರೆಗೂ ಇದೇ ಪರಿಸ್ಥಿತಿ ಇರಲಿದೆ ಎಂದು ಚೀನಾ ಎಚ್ಚರಿಸಿದೆ ಎನ್ನುವ ವಿಚಾರವೂ ತಿಳಿದುಬಂದಿದೆ. ಚೀನಾ ಆರೋಪಿಸುತ್ತಿರುವಂತೆ ಭಾರತದಲ್ಲಿ ಚೀನಾದ ಯಾವುದೇ ಪತ್ರಕರ್ತರನ್ನು ವಾಪಸ್‌ ಕಳುಹಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೊರೊನಾ ಸಂದರ್ಭದಲ್ಲಿ ಚೀನಾಗೆ ಹಿಂದಿರುಗಿದ ಹಲವು ಪತ್ರಕರ್ತರು ಮರಳಿ ಬಂದಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next