Advertisement

ಎರಡು ಹೆಂಡಿರ ಸಾಂಸಾರಿಕ ಜಂಜಾಟ : ಮದ್ಯಪಾನ ಮಾಡಿ ಇಬ್ಬರ ಸಾವು

07:01 PM Dec 03, 2021 | Team Udayavani |

ಕೊರಟಗೆರೆ: ಸಾಂಸಾರಿಕ ಜೀವನದ ಏರುಪೇರಿನ ಲ್ಲಿ ಮೊದಲನೆಯದು, ಎರಡನೇ ಹೆಂಡತಿಯರು ಹೊಂದಾಣಿಕೆ ಆಗಲಿಲ್ಲ ಎಂಬ ಕಾರಣಕ್ಕೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪುರುಷರಿಬ್ಬರು ಅತೀವ ಮಧ್ಯಪಾನದಿಂದ ಸಾವನ್ನಪ್ಪಿದ್ದಾರೆ.

Advertisement

ಓರ್ವ ದಾರಿಮಧ್ಯೆ ಬಿದ್ದು ಸಾವನ್ನಪ್ಪಿದರೆ ಮತ್ತೊಬ್ಬ ಮದ್ಯಪಾನದ ಜೊತೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಕೊರಟಗೆರೆ ಪಟ್ಟಣದ ಕಟ್ಟೆ ಗಣಪತಿ ಕಲ್ಯಾಣಮಂಟಪದಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಅಪ್ಪ ರೆಡ್ಡಿ ಅತಿ ಮಧ್ಯಪಾನದಿಂದ ರಸ್ತೆಬದಿಯಲ್ಲಿ ಬಿದ್ದು ಸಾವನ್ನಪ್ಪಿದರೆ ಮತ್ತೊಬ್ಬ ತೋವಿನಕೆರೆ ಹೋಬಳಿಯ ಕಬ್ಬಿಗೆರೆ ಗೊಲ್ಲರಟ್ಟಿ ಯ ಭೂತರಾಯ ಮದ್ಯಪಾನದ ಜೊತೆ ಕ್ರಿಮಿನಾಶಕ ಬೆರೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ತಮಿಳುನಾಡು ಮೂಲದ ಅಪ್ಪ ರೆಡ್ಡಿ ಮೊದಲನೇ ಹೆಂಡತಿಯನ್ನು ತಮಿಳುನಾಡಿನಲ್ಲಿ ಬಿಟ್ಟು ಎರಡನೇ ಹೆಂಡತಿ ಗೌರಿಬಿದನೂರಿನಲ್ಲಿ ವಾಸವಿದ್ದು, ಮೊದಲ ಹಾಗೂ ಎರಡನೇ ಹೆಂಡತಿ ಇಬ್ಬರಿಂದಲೂ ಸ್ಪಂದನೆ ಸಿಗದ ಕಾರಣ ಸಾಂಸಾರಿಕ ಜೀವನದಲ್ಲಿ ಜಿಗುಪ್ಸೆಗೊಂಡು ಕೊರಟಗೆರೆ ಪಟ್ಟಣದ ಕಟ್ಟೆ ಗಣಪತಿ ಕಲ್ಯಾಣ ಮಂಟಪದಲ್ಲಿ ಕೂಲಿ ಕೆಲಸ ಮಾಡಿಕೊಂಡು ಆಶ್ರಯ ಪಡೆದಿದ್ದ. ಸಾಂಸಾರಿಕ ಜೀವನದ ಕುರಿತಾಗಿ ಜಿಗುಪ್ಸೆಯಿಂದ ಅತೀವ ಮಧ್ಯಪಾನ ಮಾಡಿ ಕೊರಟಗೆರೆ ಬೈಪಾಸ್ ನ ಪಾಳುಮನೆ ಬಳಿ ಬಿದ್ದು ಮಧ್ಯರಾತ್ರಿ ಸಾವನ್ನಪ್ಪಿರಬಹುದು ಎನ್ನಲಾಗಿದೆ.

ಮತ್ತೋರ್ವ ಭೂತರಾಯ ತೋವಿನಕೆರೆ ಹೋಬಳಿ ಕಬ್ಬಿಗೆರೆ ಗೊಲ್ಲರಟ್ಟಿ ವಾಸಿಯಾಗಿದ್ದು, ಮೊದಲನೇ ಹೆಂಡತಿ ಬುಕ್ಕಾಪಟ್ಟಣ ದಲ್ಲಿ ವಾಸವಿದ್ದು ಈಕೆಯೊಂದಿಗೆ ಮನಸ್ತಾಪ ಮಾಡಿಕೊಂಡು ಎರಡನೆಯ ಹೆಂಡತಿಯಾಗಿ ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿ ಗೊಲ್ಲಹಳ್ಳಿಯ ಗೌರಮ್ಮ ನೊಂದಿಗೆ ಜೀವನ ಸಾಗಿಸುತ್ತಿದ್ದು ಕಳೆದ 2-3 ವರ್ಷಗಳಿಂದ ಅವಳಲ್ಲೂ ಹೊಂದಾಣಿಕೆಯಾಗದೆ ಗೌರಮ್ಮ ಸಹ ಬಿಟ್ಟು ಹೋದ ಕಾರಣ ಮನನೊಂದು ಮಧ್ಯಪಾನ ದೊಂದಿಗೆ ಕ್ರಿಮಿನಾಶಕ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿ ತೋವಿನಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾನೆ.

Advertisement

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜ ಪ್ರತ್ಯೇಕ ಪ್ರಕರಣಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next