Advertisement

ಎರಡು ದಿನಗಳ ಬಹು ಭಾಷಾ ಸಾಹಿತ್ಯೋತ್ಸವ ಆರಂಭ

08:38 PM Jun 08, 2019 | mahesh |

ಕಾಸರಗೋಡು: ಕಾಸರಗೋಡು ಜಿಲ್ಲಾ ಗ್ರಂಥಾಲಯ, ಭಾಷಾ ಅಲ್ಪಸಂಖ್ಯಾಕರ ಕಾರ್ನರ್‌ ಜಂಟಿ ವತಿಯಿಂದ ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ಎರಡು ದಿನಗಳ ಬಹುಭಾಷಾ ಸಾಹಿತ್ಯೋತ್ಸವ ಆರಂಭಗೊಂಡಿತು. ದಿಲ್ಲಿಯ ನ್ಯಾಶ‌ನಲ್‌ ಸ್ಕೂಲ್‌ ಆಫ್‌ ಡ್ರಾಮಾದ ನಿರ್ದೇಶಕ ಪ್ರಸನ್ನ ಸಾಹಿತ್ಯೋತ್ಸವ ಉದ್ಘಾಟಿಸಿದರು.

Advertisement

ಶಾಸಕ ಎನ್‌.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ರಾಜ್ಯ ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ನ್ಯಾಯವಾದಿ ಪಿ. ಅಪ್ಪುಕುಟ್ಟನ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್‌ ಎಂ. ಸಾಲ್ಯಾನ್‌, ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್‌.ವಿ. ಭಟ್‌, ವಿವಿಧ ವಲಯಗಳ ಗಣ್ಯರಾದ ಎಂ. ಶಂಕರ ರೈ ಮಾಸ್ಟರ್‌, ಡಾ| ಪಿ. ಪ್ರಭಾಕರ್‌, ಇ. ಜನಾರ್ದನ್‌, ಯು.ಶ್ಯಾಮ ಭಟ್‌ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

ಪಿ.ವಿ.ಕೆ. ಪನಯಾಲ್‌ ಸ್ವಾಗತಿಸಿದರು. ಪಿ.ಕೆ.ಅಹಮ್ಮದ್‌ ಹುಸೇನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next