Advertisement

ಮಕ್ಕಳ ಕಳ್ಳರೆಂದು ಇಬ್ಬರಿಗೆ ಥಳಿತ; ಆರು ಜನರ ಬಂಧನ

11:13 PM Sep 15, 2019 | Team Udayavani |

ಚಿತ್ತಾಪುರ: ಮಕ್ಕಳನ್ನು ಕಳ್ಳತನ ಮಾಡಿ ಅಂಗಾಂಗ ಮಾರುತ್ತಾರೆಂಬ ವದಂತಿ ತಾಲೂಕಿನಾದ್ಯಂತ ಹರಡಿದ್ದು, ಸ್ಟೇಷನ್‌ ತಾಂಡಾಕ್ಕೆ ಬಂದಿದ್ದ ಇಬ್ಬರನ್ನು ಮಕ್ಕಳ ಕಳ್ಳರೆಂದು ತಿಳಿದು ಥಳಿಸಿದ ಘಟನೆ ನಡೆದಿದೆ. ಕಲಬುರಗಿ ತಾಲೂಕು ಮುತ್ಯಾನ ಬಬಲಾದ ಗ್ರಾಮದ ಶಂಕರ ಗಂಗಾರಾಮ ಜೋಶಿ, ಸಂತೋಷ ಶಂಕರ ಜೋಶಿ ಎಂಬುವರನ್ನು ಥಳಿಸಲಾಗಿದ್ದು,

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರ ರಾಠೊಡ, ಗುರುನಾಥ ರಾಠೊಡ, ಅಂಬಾದಾಸ ಚವ್ಹಾಣ, ಅಂಬರೀಶ ಚವ್ಹಾಣ, ಬಸಪ್ಪ ಕಡೆಸೂರ್‌ ಹಾಗೂ ಥಳಿತದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ ವೆಂಕಟೇಶ ಜಾಧವನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಅಲ್ಲದೇ ಎಲ್ಲಿಯೂ ಮಕ್ಕಳ ಕಳ್ಳತನ ನಡೆದಿಲ್ಲ. ಮಕ್ಕಳ ಕಳ್ಳರು ಎಂಬುದು ಶುದ್ಧ ಸುಳ್ಳು. ಇಂತಹ ಸುದ್ದಿಗಳಿಗೆ ಯಾರೂ ಕಿವಿಗೊಡಬಾರದೆಂದು ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next