Advertisement

ವಲಸೆ ಕಾರ್ಮಿಕರ ಪ್ರಯಾಣದ ವೆಚ್ಚ 1.82 ಲಕ್ಷ ರೂ. ಭರಿಸಿದ ರಾಮ-ಲಕ್ಷ್ಮಣ

10:56 PM May 22, 2020 | Hari Prasad |

ಲಾಕ್‌ಡೌನ್‌ನಿಂದ ಪುಟ್ಟಪರ್ತಿಯಲ್ಲಿ ಸಿಲುಕಿಕೊಂಡಿದ್ದ ಕಾಶ್ಮೀರ ವಲಸೆ ಕಾರ್ಮಿಕರನ್ನು ತವರಿಗೆ ಸೇರಿಸಲು ‘ರಾಮ, ಲಕ್ಷ್ಮಣ’ ನೆರವಾಗುವ ಮೂಲಕ ಔದಾರ್ಯ ಮೆರೆದಿದ್ದಾರೆ.

Advertisement

ಸುಮಾರು 80 ಕಾರ್ಮಿಕರು ರೈಲು ಮೂಲಕ ಊರು ಸೇರಲು 436 ಕಿ.ಮೀ. ದೂರದ ಹೈದರಾಬಾದ್‌ ತಲುಪಬೇಕಾಗಿತ್ತು.

ಸ್ಥಳೀಯ ಆಡಳಿತವು, ಅವರನ್ನು ಹೈದರಾಬಾದ್‌ಗೆ ತಲುಪಿಸಲು ಬಸ್‌ ವ್ಯವಸ್ಥೆ ಮಾಡಿತ್ತು. ಆದರೆ, ಕಾರ್ಮಿಕರು 1.82 ಲಕ್ಷ ರೂ. ನೀಡಬೇಕಿತ್ತು.

ಇದನ್ನು ಭರಿಸಲಾಗದ ವಲಸೆ ಕಾರ್ಮಿಕರ ದುಸ್ಥಿತಿಯನ್ನು ಕಂಡ ಉದ್ಯಮಿ, ಅವಳಿ ಸಹೋದರರಾದ ರಾಮ, ಲಕ್ಷ್ಮಣ್‌ ರಾವ್‌ ಈ ಮೊತ್ತವನ್ನು ತಾವೇ ಭರಿಸಿ, ಅವರನ್ನು ತವರಿಗೆ ತಲುಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next