Advertisement

ರಾಯಚೂರು: ಸಿಡಿಲಿನ ಹೊಡೆತಕ್ಕೆ ಸಹೋದರರಿಬ್ಬರು ಬಲಿ

08:54 PM Jul 24, 2020 | Hari Prasad |

ರಾಯಚೂರು: ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆ ಹಲವು ಕಡೆಗಳಲ್ಲಿ ಅವಾಂತರಗಳನ್ನು ಸೃಷ್ಟಿಸಿದೆ.

Advertisement

ಸಂಜೆ ದೇವದುರ್ಗದಲ್ಲಿ ಬಂಡೆ ಉರುಳಿ ಬಾಲಕರಿಬ್ಬರು ಮೃಪಟ್ಟಿದ್ದರು ಇದೀಗ ಸಿಡಿಲಿನ ಹೊಡೆತಕ್ಕೆ ಇಬ್ಬರು ಸಹೋದರರು ಬಲಿಯಾಗಿರುವ ದಾರುಣ ಘಟನೆ ವರದಿಯಾಗಿದೆ.

ತಾಲೂಕಿನ ಸಿಂಗನೋಡಿ ಗ್ರಾಮದ ಹೊರವಲಯದ ಹೊಲದಲ್ಲಿ ಸಿಡಿಲು ಬಡಿದು ರವಿಚಂದ್ರ (23), ವಿಷ್ಣು (18) ಎಂಬ ಸಹೋದರರು ಮೃತಪಟ್ಟಿದ್ದಾರೆ, ಇವರಿಬ್ಬರ ತಾಯಿ ಮಹಾದೇವಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಂದೆ ಗೋವಿಂದ ಜತೆ ತಾಯಿ, ಸಹೋದರರಿಬ್ಬರು ಜಮೀನಿನಲ್ಲಿ ಹಾಕಿದ್ದ ಜೋಪಡಿಯಲ್ಲಿ ಕುಳಿತಿದ್ದರು. ಆ ಸಂದರ್ಭದಲ್ಲಿ ಜೋಪಡಿಗೇ ಸಿಡಿಲು ಬಡಿದಿದೆ. ತಂದೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಯಾಪಲದಿನ್ನಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next