Advertisement

Turuvekere: ಗಣೇಶ ವಿಸರ್ಜನೆ ವೇಳೆ ಮುಳುಗಿ ತಂದೆ, ಮಗ ಸೇರಿ ಮೂವರ ಸಾವು

09:19 PM Sep 15, 2024 | Team Udayavani |

ತುರುವೇಕೆರೆ: ಗಣಪತಿ ವಿಸರ್ಜಿಸಲು ಹೋಗಿ ತಂದೆ, ಮಗ ಸೇರಿ ಮೂವರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯಲ್ಲಿ ಭಾನುವಾರ ನಡೆದಿದೆ.

Advertisement

ಮಾರಸಂದ್ರ ಸಮೀಪದ ರಂಗನಹಟ್ಟಿ ಗ್ರಾಮದ ರೇವಣ್ಣ(50), ಇವರ ಪುತ್ರ ಶರತ್‌(26), ದಯಾನಂದ್‌(22) ಮೃತರು.

ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯನ್ನು ಯುವಕರೆಲ್ಲ ಸೇರಿ ರಂಗನಕಟ್ಟೆಯಲ್ಲಿ ವಿಸರ್ಜನೆ ಮಾಡಲು ಬಂದಾಗ ಗಣೇಶ ಮೂರ್ತಿಯನ್ನು ಹಿಡಿದು ಶರತ್‌, ದಯಾನಂದ್‌ ನೀರಿಗೆ ಇಳಿದಿದ್ದಾರೆ. ಈ ವೇಳೆ ಕಟ್ಟೆಯಲ್ಲಿನ ಕೆಸರಿನಿಂದ ಕಾಲುಗಳು ಹೂತುಕೊಂಡು ಈಜಲು ಸಾಧ್ಯವಾಗದೇ ಕಟ್ಟೆಯ ದಡದಲ್ಲಿದ್ದವರ ಸಹಾಯಕ್ಕೆ ಕೂಗಿಕೊಂಡಿದ್ದಾರೆ.

ತಕ್ಷಣ ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಶರತ್‌ ಅವರ ತಂದೆ ರೇವಣ್ಣನೂ ನೀರಿಗೆ ಧುಮಿಕಿದ್ದಾರೆ. ಆತನೂ ಈಜಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ದಂಡಿನಶಿವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next