Advertisement

ಆಮೆಗಳ ಮಾರಾಟ ಜಾಲ: 7 ಮಂದಿ ಸೆರೆ

11:20 PM Sep 14, 2019 | Lakshmi GovindaRaju |

ಚಿಕ್ಕಮಗಳೂರು: ಆಮೆಗಳನ್ನು ಹಿಡಿದು ಮಾರಾಟಕ್ಕೆ ಯತ್ನಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಮಂದಿಯನ್ನು ಬಂಧಿಸಿ ಮೂರು ಆಮೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಗರದ ವಿಜಯಪುರ ಬಡಾವಣೆ ಒಕ್ಕಲಿಗರ ಕಲ್ಯಾಣ ಮಂಟಪ ಎದುರಿನ ರಸ್ತೆಯಲ್ಲಿ ಆಮೆ ಸಾಗಾಟದ ಕುರಿತು ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ದಾಳಿ ನಡೆಯಿತು.

Advertisement

ತರೀಕೆರೆ ತಾಲೂಕು ಉಡೇವಾ ಲಂಬಾಣಿ ಬೀದಿ ಪರಮೇಶ ನಾಯ್ಕ (20), ನಗರದ ಗವನಹಳ್ಳಿ ಸಿ.ಕೆ.ಸುಮನ್‌ (17), ಮೂಡಿಗೆರೆ ತಾಲೂಕು ಬಿರುಗೂರಿನ ಬಿ.ಎಸ್‌.ಅಂಕುಶ, ಜಾವಳಿ ಸಮೀಪ ಮೇಲುಕೊಡುಗೆಯ ಎಂ.ಎಸ್‌.ಸುಕೇಶ್‌, ಬೀರೂರು ಅಶೋಕ ನಗರದ ಬಿ.ಟಿ.ನಾಗರಾಜ್‌, ಲಿಂಗದಹಳ್ಳಿಯ ಎಲ್‌.ಆರ್‌.ದರ್ಶನ್‌ ಬಂಧಿತರು. ಬಂಧಿತರಿಂದ ಒಂದು ಜೀವಂತ ಆಮೆ, ಒಂದು ಕಾರು ಹಾಗೂ ಬೈಕ್‌ ವಶಪಡಿಸಿಕೊಳ್ಳಲಾಗಿದೆ.

2 ಆಮೆ ವಶ: ಮತ್ತೂಂದು ಪ್ರಕರಣದಲ್ಲಿ ನಗರದ ಟೌನ್‌ ಕ್ಯಾಂಟೀನ್‌ ಬಳಿ ದಾಳಿ ನಡೆಸಿದ ಅರಣ್ಯ ಸಂಚಾರ ಪೊಲೀಸ್‌ ದಳದ ಸಿಬ್ಬಂದಿ ನಾರಾಯಣಪುರದ ಈಶ್ವರರೆಡ್ಡಿ ಎಂಬವನನ್ನು ಬಂಧಿಸಿ ಎರಡು ಜೀವಂತ ಆಮೆ ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next