Advertisement

Tungabhadra dam gate; ಅಪರೇಷನ್ ಸಕ್ಸಸ್: ಕಾರ್ಮಿಕರಿಗೆ 50 ಸಾವಿರ ರೂ. ಸಹಿತ ಸಮ್ಮಾನ

09:12 PM Aug 18, 2024 | Team Udayavani |

ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ಗೆ ಸ್ಟಾಪ್ ಲಾಗ್ ಎಲಿಮೆಂಟ್ ಅಳವಡಿಕೆ ಅಪರೇಷನ್ ನಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ ಅವರ ನೇತೃತ್ವದಲ್ಲಿ ಭಾನುವಾರ (ಆ18) ಸಮ್ಮಾನ ಕಾರ್ಯಕ್ರಮ ನಡೆಸಲಾಯಿತು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ನೀಡಿದ್ದ ಭರವಸೆಯಂತೆ ತಲಾ 50 ಸಾವಿರ ರೂ ನಗದು ಸಹಿತ ಸಮ್ಮಾನಿಸಿ ಗೌರವಿಸಲಾಯಿತು.

ನಾರಾಯಣ್ ಎಂಜಿನಿಯರಿಂಗ್, ಹಿಂದೂಸ್ಥಾನಿ ಇಂಜಿನಿಯರಿಂಗ್ ಹಾಗೂ ಜಿಂದಾಲ್ ಕಂಪನಿ ಪ್ರತಿನಿಧಿಗಳಿಗೆ ಗೌರವ ಸಮರ್ಪಿಸಿ ಅಭಿನಂದಿಸಲಾಯಿತು.

ಶಾಸಕ ಜೆ.ಎನ್. ಗಣೇಶ್ ಮಾತನಾಡಿ ‘ ಡ್ಯಾಂ ಗೇಟ್ ವಿಷಯದಲ್ಲಿ ಶ್ರಮಿಸಿದ ಕಾರ್ಮಿಕರು, ಟೆಕ್ನಿಷಿಯನ್ಸ್ ಗಳ ಕಾರ್ಯ ದೊಡ್ಡದು.ಈ ಕಾರ್ಯದಲ್ಲಿ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಅವರ ಶ್ರದ್ದೆ ಬಹಳ ಇದೆ. ಅದೇ ರೀತಿಯಾಗಿ ಒಂದು ವಾರದಲ್ಲಿ ಇಂತಹ ಬೃಹತ್ ಸಮಸ್ಯೆಯನ್ನು ಪರಿಹರಿಸುವ ಕಾರ್ಯವಾಗಿದೆ. ಇಂದು ಡ್ಯಾಂ ಕಾರ್ಯ ಸುಸೂತ್ರವಾಗಿ ನಡೆದಿದೆ. ಅದ್ದರಿಂದ ಪ್ರತಿಯೊಬ್ಬರು ಸಂತೋಷದಿಂದ ಇದ್ದಾರೆ.ಇಂದು ರೈತರು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದಾರೆ. ಇವರೆಲ್ಲರೂ ವೈಯಕ್ತಿಕ ಕಾರ್ಯಗಳನ್ನು ಬದಿಗೊತ್ತಿ ಡ್ಯಾಂ ಕಾರ್ಯ ಮಾಡಿದ್ದಾರೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next