Advertisement

ತುಮಕೂರು : ಕೆರೆಯಲ್ಲಿ ಮುಳಗಿ ಬಾಲಕರಿಬ್ಬರ ಸಾವು

01:32 PM Oct 28, 2019 | Suhan S |

ತುಮಕೂರು : ಕೆರೆಯಲ್ಲಿ  ಮುಳುಗಿ ಬಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜೆಲ್ಲೆಯ ಯಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ನಿನ್ನೆಯಷ್ಟೇ ಪಟ್ಟನಾಯಕನಹಳ್ಳಿ ಆಟವಾಡಲು ಹೋಗಿ ಬಾಲಕರಿಬ್ಬರು ಕಟ್ಟೆಯಲ್ಲಿ ಮುಳಗಿ ಮೃತ ಪಟ್ಟಿದ್ದ ಘಟನೆ ಮಾಸುವ ಮುನ್ನವೇ ಇಂದು ಯಲಪ್ಪನಹಳ್ಳಿ ಗ್ರಾಮದ ಬಾಲಕರಾದ ಯೋಗೀಶ್  (15),  ಸಿದ್ಧೇಶ್(11)  ಕೆರೆಯಲ್ಲಿ ಮುಳುಗಿ ಮೃತ ಪಟ್ಟಿರುವ ದುರ್ಘಟನೆ ನಡೆದಿದೆ.

ದೀಪಾವಳಿ ಪ್ರಯುಕ್ತ ಎಮ್ಮೆ ಹಾಗೂ ಬೈಕ್ ತೊಳೆಯಲು ಬಾಲಕರಿಬ್ಬರು ಕೆರೆ ಕಡೆ ಹೋಗಿದ್ದರು. ಈ ವೇಳೆಯಲ್ಲಿ ಕೆರೆಯಲ್ಲಿ ಅಳವಿರುವ ಜಾಗಕ್ಕೆ ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಯಲಪ್ಪನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next