Advertisement

ಕೋವಿಡ್ ಜಾಗೃತಿ : ತುಮಕೂರಿನ ಪೊಲೀಸರಿಂದ ಕಾಲ್ನಡಿಗೆಯ ಗಸ್ತು

08:49 PM Jun 02, 2021 | Team Udayavani |

ತುಮಕೂರು : ಲಾಕ್ ಡೌನ್ ವೇಳೆಯಲ್ಲಿಯೂ ಪೊಲೀಸರ ಕಣ್ಣುತಪ್ಪಿಸಿ  ಬೈಕ್ ಗಳಲ್ಲಿ ಅಡ್ಡಾಡುವವರಿಗೆ ಮತ್ತು ಮಾಸ್ಕ್ ಹಾಕಿಕೊಳ್ಳದೇ ತಿರುಗುವವರಿಗೆ ಜಾಗೃತಿ ಮೂಡಿಸಿ ಅಗತ್ಯ ಬಿದ್ದರೆ ದಂಡ ಹಾಕುವ ಪ್ರಕ್ರಿಯೆಗೆ ಜಿಲ್ಲಾ ಪೊಲೀಸರಿಂದ ಕಾಲ್ನಡಿಗೆ ಜಾಥಕ್ಕೆ  ಚಾಲನೆ ದೊರೆಯಿತು.

Advertisement

ಕೋವಿಡ್ ಸೋಂಕನ್ನು ಕಟ್ಟಿಹಾಕಲು ಸರ್ಕಾರ ಸಾಕಷ್ಟು ಶ್ರಮ ವಹಿಸುತ್ತಿದೆ.‌ ಆದರೆ ಪೊಲೀಸರಿಗೆ ಒಂದಲ್ಲ ಒಂದು ಸುಳ್ಳು ಹೇಳಿ ಜನ ತಪ್ಪಿಸಿಕೊಳ್ಳುತ್ತಾರೆ. ಇನ್ನು ಮುಂದೆ ತುಮಕೂರು ಜನರು ಸುಳ್ಳು ಹೇಳಲು ಆಗುವುದಿಲ್ಲ.. ಬೀದಿ ಬೀದಿಗಳಲ್ಲಿ .. ಗಲ್ಲಿ  ಗಲ್ಲಿಗಳಲ್ಲಿ ಓಡಾಡುವ ಜನರು ಇನ್ನು ಮುಂದೆ ಹುಷಾರಾಗಿ ಇರಬೇಕು. ‌ಯಾಕೆ ಅಂದರೆ ಪೊಲೀಸರು ಕಾಲ್ನಡಿಗೆ ಗಸ್ತು ತಿರುಗುತ್ತಿದ್ದಾರೆ.

ಇದನ್ನೂ ಓದಿ : ಯೋಗಿ ಆದಿತ್ಯನಾಥ್‌ ಬಿಜೆಪಿಯ ಪ್ರಶ್ನಾತೀತ ನಾಯಕ : ಬಿ.ಎಲ್‌.ಸಂತೋಷ್‌

ಈ ನೂತನ ಪ್ರಯೋಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಕೋ.ನಂ.ವಂಸಿ ಕೃಷ್ಣ  ಅವರು ಮೆಳೆಕೋಟೆ ರಸ್ತೆಯಿಂದ  ಚಾಲನೆ ನೀಡಿದ್ದಾರೆ.

ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಂದ ಐದು ಜನರ ತಂಡ ರಚಿಸಿ ಕೋವಿಡ್ 19 ರ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ, ಮುನ್ನೆಚ್ಚರಿಕೆ, ಹಾಗೂ ಮಾಸ್ಕ್ ಧರಿಸಿಕೂಳ್ಳದಿರುವವರ ಮೇಲೆ ದಂಡ ಕೂಡ ಹಾಕಲಾಗುತ್ತದೆ.

Advertisement

ನಗರದ ಪ್ರಮುಖ ರಸ್ತೆ ಗಳಲ್ಲಿ ಚೆಕ್ ಪಾಯಿಂಟ್ ಹಾಕಲಾಗಿದ್ದು, ಇಲ್ಲಿ ರಸ್ತೆಯಲ್ಲಿ ವಾಹನಗಳಲ್ಲಿ ಸುಮ್ಮನೆ ತಿರುಗುತ್ತಿರುವ ವಿಚಾರಣೆ ಮತ್ತು ದಂಡ ಹಾಕಲಾಗುತ್ತದೆ,  ಆದರೆ ಗಲ್ಲಿ  ರಸ್ತೆಯಲ್ಲಿ ಪೊಲೀಸರು ಕಾಲ್ನಡಿಗೆ ಮೂಲಕ ಹೋದರೆ  ಸಾರ್ವಜನಿಕರಿಗೆ ಅರಿವುಮೂಡಿಸಬಹುದು ಎಂಬ ಉದ್ದೇಶದಿಂದ ತುಮುಕೂರು ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಈ ಕಾಲ್ನಡಿಗೆ ಗಸ್ತಿನಲ್ಲಿ ಅಡಿಷನಲ್ ಎಸ್ಪಿ ಟಿ.ಜೆ.ಉದೇಶ, ಹಾಗೂ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಇದನ್ನೂ ಓದಿ : ಕಾನೂನು ಬಾಹಿರ ಲೇಔಟ್‌ ಮುಟ್ಟು ಗೋಲಿಗೆ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next