Advertisement

ರಾಜಧಾನಿಯಲ್ಲಿ ಮಿಂಚಿದ ‘ತುಳುನಾಡ ನೆನಪು’ಅಂಡರ್ ಆರ್ಮ್ ಕ್ರಿಕೆಟ್

10:08 AM Sep 25, 2019 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಕರಾವಳಿಗರಿಗಾಗಿ ಅನಾಥಾಶ್ರಮದ ಮಕ್ಕಳ ಸಹಾಯಾರ್ಥವಾಗಿ ‘ತುಳುನಾಡ ನೆನಪು’ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಇತ್ತೀಚೆಗೆ ಸಿಂಗಸಂದ್ರದಲ್ಲಿ ನಡೆಯಿತು.

Advertisement

ಪುರುಷರಿಗೆ ಮತ್ತು ಮಹಿಳೆಯರಿಗೆ ಈ ಪಂದ್ಯಾಟ ನಡೆದಿದ್ದು, ಒಟ್ಟು 60 ತಂಡಗಳು ಭಾಗವಹಿಸಿದ್ದವು. ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಆಗಮಿಸಿ ಶುಭ ಕೋರಿದರು.

ಪುರುಷುರ ವಿಭಾಗದಲ್ಲಿ ಪ್ರಥಮ  ಸ್ಥಾನ ಸ್ವಸ್ತಿಕ್ ಪಡ್ಡಾಯೂರು ಪಡೆದರೆ, ಬಿರುವೆರ್ ಬೆಂಗಳೂರು ದ್ವಿತೀಯ ಸ್ಥಾನಿಯಾಯಿತು. ತೃತೀಯ ಸ್ಥಾನ ಮತ್ತು ಚತುರ್ಥ ಸ್ಥಾನ ಕ್ರಮವಾಗಿ ಶಿಶಿರ್ ಪುತ್ತೂರು ಮತ್ತು ಜೆ ಡಿ ಬಾಯ್ಸ್ ಬಂಟ್ವಾಳ ತಂಡಗಳು ಪಡೆದವು.

ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಎಸ್ ಎಂ ಎಸ್ ಫ್ಯಾಮಿಲಿ ಪಡೆದರೆ, ದ್ವಿತೀಯ ಸ್ಥಾನ ಬಜಗೋಳಿ ಬುಲ್ಸ್ ಪಾಲಾಯಿತು.

Advertisement

Advertisement

Udayavani is now on Telegram. Click here to join our channel and stay updated with the latest news.

Next