Advertisement

ತುಳು ನಾಟಕ ಪ್ರದರ್ಶನ ಇಂದು

11:42 AM Jan 14, 2018 | Team Udayavani |

ಬೆಂಗಳೂರು: ದಕ್ಷಿಣ ಕನ್ನಡ ಕುಲಾಲ ಸಂಘದ ವಿದ್ಯಾರ್ಥಿ ನಿಧಿ ಸಹಾಯಾರ್ಥವಾಗಿ ಜ.14ರ ಮಧ್ಯಾಹ್ನ 1 ಗಂಟೆಗೆ ಅಣ್ಣೆ ಬಪೆìಗೆ ಮತ್ತು ಸಂಜೆ 4 ಗಂಟೆಗೆ ಅಂಚಗೆ ಇಂಚಗೆ ತುಳು ಹಾಸ್ಯ ನಾಟಕ ಪ್ರದರ್ಶನವನ್ನು ನಗರದ ಟೌನ್‌ಹಾಲ್‌ನಲ್ಲಿ ಆಯೋಜಿಸಲಾಗಿದೆ.

Advertisement

ಗಡಿನಾಡು ಕಲಾವಿದ ಕೃಷ್ಣ ಜಿ. ಮಂಜೇಶ್ವರ ನಿರ್ದೇಶನದ ಸೋಮನಾಥ ಶೆಟ್ಟಿ ಮಂಗಲ್ಪಾಡಿಯವರ ರಚನೆಯ, ದೀಪಕ್‌ ರೈ ಪಾಣಾಜೆ ಮತ್ತಿತರರ ಅಭಿನಯದ ಅಣ್ಣೆ ಬಪೆìಗೆ ನಾಟಕ ಪ್ರದರ್ಶನ ಮಾಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಚಲನಚಿತ್ರ ನಟ, ಕುಸಲ್ದರಸೆ ನವೀನ್‌ ಡಿ. ಪಟೀಲ್‌ ನಿರ್ದೇಶಿಸಿರುವ ಗಡಿನಾಡು ಕಲಾವಿದ ಕೃಷ್ಣ ಜಿ. ಮಂಜೇಶ್ವರ ರಚನೆಯ,

ಚಲನಚಿತ್ರ ನಟ ಸುಂದರ ರೈ ಮಂದಾರ ಅವರ ಅಭಿನದಯದ ಅಂಚಗೆ ಇಂಚಗೆ ನಾಟಕ ಪ್ರದರ್ಶನ ಸಂಜೆ 4 ಗಂಟೆಗೆ ನಡೆಯಲಿದೆ. ಈ ಎರಡು ನಾಟಕವನ್ನು ಮಂಜೇಶ್ವರದ ಶಾರದ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next