Advertisement

ಭಕ್ತರ ಮನೆಗೆ ಪ್ರಸಾದ ತಲುಪಿಸುವ ಭರವಸೆ : ನಕಲಿ ವೆಬ್ ಸೈಟ್ ವಿರುದ್ಧ ಟಿಟಿಡಿ ದೂರು

05:31 PM Dec 11, 2020 | sudhir |

ತಿರುಪತಿ: ತಿರುಪತಿ ದೇಗುಲದ ಲಡ್ಡು ಪ್ರಸಾದವನ್ನು ಮನೆಗೇ ತಲುಪಿಸುವುದಾಗಿ ವಂಚಿಸುವ ವೆಬ್‌ಸೈಟ್‌ ಜಾಲ ಬಯಲಾಗಿದೆ.

Advertisement

ಈ ಬಗ್ಗೆ ತನಿಖೆ ನಡೆಸುವಂತೆ ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ) ಅಧ್ಯಕ್ಷ ವೈ.ವಿ.ಸುಬ್ಟಾ ರೆಡ್ಡಿ, ಜಾಗೃತ ದಳಕ್ಕೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ ಮತ್ತು ದೇಗುಲ ಆವರಣದಲ್ಲಿನ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

www.balajiprasadam.com ಎಂಬ ಹೆಸರಿನ ವೆಬ್‌ಸೈಟ್‌ ಜಗತ್ತಿನ ಯಾವುದೇ ಭಾಗಕ್ಕೆ ತಿರುಪತಿ ಲಡ್ಡು ಪ್ರಸಾದ ಬೇಕಾದರೆ ಮನೆಗೇ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅದರಲ್ಲಿ ಹೇಳಿಕೊಳ್ಳಲಾಗಿದೆ.

ಮನೆಗೇ ತಿರುಪತಿ ಲಡ್ಡು ಪ್ರಸಾದ ಕಳುಹಿಸಿಕೊಡುವ ವ್ಯವಸ್ಥೆ ಇದೆ ಎಂಬ ಮೆಸೇಜ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವುದರಿಂದಾಗಿ ನಕಲಿ ವೆಬ್‌ಸೈಟ್‌ ಜಾಲದ ಬಗ್ಗೆ ಮಾಹಿತಿ ಗೊತ್ತಾಗಿದೆ.

ಇದನ್ನೂ ಓದಿ:ಚಿನ್ನ, ಬೆಳ್ಳಿ ಬೆಲೆ ಇಳಿಕೆ:ಡಿ.11ರಂದು 22, 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ಎಷ್ಟು ಕುಸಿತ

Advertisement
Advertisement

Udayavani is now on Telegram. Click here to join our channel and stay updated with the latest news.

Next