Advertisement

Kundapur: ಟಿ.ಟಿ. ಚರಂಡಿಗೆ; 12 ಮಂದಿಗೆ ಗಾಯ

09:07 PM May 25, 2024 | Team Udayavani |

ಕುಂದಾಪುರ: ಚಾಲಕನ ವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಮೈಲುಗಂಬಕ್ಕೆ ಢಿಕ್ಕಿಯಾದ ಟಿಟಿ ವಾಹನವೊಂದು ಚರಂಡಿಗಿಳಿದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ 12 ಮಂದಿ ಗಾಯಗೊಂಡ ಘಟನೆ ಮೇ 24ರಂದು ಕೋಟೇಶ್ವರ – ಹಾಲಾಡಿ ಮುಖ್ಯ ರಸ್ತೆಯ ಕಾಳಾವರ ರೈಲ್ವೇ ಸೇತುವೆ ಬಳಿ ಸಂಭವಿಸಿದೆ.

Advertisement

ಟಿಟಿಯಲ್ಲಿದ್ದ ರಾಮನಗರ ಮೂಲದ ರಾಮಚಂದ್ರ (47), ಭೂಮಿಕಾ (8), ನೀತು (13), ಮಿಥುನ್‌ (14), ಮಾನಸ (13), ವರ್ಷಿನಿ (15), ಯಲ್ಲಮ್ಮ (58), ಅಶ್ವಿ‌ನಿ (32), ಜಮುನಾ (40), ಕಮಲಮ್ಮ (50), ವೆಂಕಟೇಶ್‌ (38) ಹಾಗೂ ಗೌತಮ್‌ (29) ಗಾಯಗೊಂಡವರು. ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರೆಲ್ಲರೂ ಬೆಂಗಳೂರಿನಿಂದ ಕುಂದಾಪುರ ಮಾರ್ಗವಾಗಿ ಮುಡೇìಶ್ವರಕ್ಕೆ ತೆರಳುತ್ತಿರುವಾಗ ಈ ಅವಘಡ ಸಂಭವಿಸಿದೆ.

ಟಿಟಿ ವಾಹನ ಚಾಲಕ ಶ್ರೀನಿವಾಸನ ವಿರುದ್ಧ ರಾಮಚಂದ್ರ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next