Advertisement

ಮಹಿಷ ದಸರಾ ಆಚರಣೆಗೆ ಯತ್ನ; 20 ಮಂದಿ ಬಂಧನ

09:46 AM Oct 06, 2019 | Team Udayavani |

ಮೈಸೂರು: ಮಹಿಷ ದಸರಾ ಆಚರಣೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆಯಿಂದ ಬೆಟ್ಟಕ್ಕೆ ಪ್ರತಿಭಟನಾ ಜಾಥಾ ಹೊರಟಿದ್ದ ಮಹಿಷ ದಸರಾ ಆಚರಣೆ ಸಮಿತಿಯ ಸುಮಾರು 20 ಮಂದಿ ಸದಸ್ಯರನ್ನು ಪೊಲೀಸರು ಶನಿವಾರ ಬಂಧಿಸಿದರು.

Advertisement

ಮತ್ತೆ ಕೆಲವರು ಬೆಟ್ಟದ ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಯತ್ನಿಸಿದರು. ಇವರನ್ನೂ ಪೊಲೀಸರು ಬಂಧಿಸಿದ್ದಾರೆ‌. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next