Advertisement
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ನೂಪುರ ನೃತ್ಯ ಅಕಾಡೆಮಿ, ಜನಧ್ವನಿ ಟ್ರಸ್ಟ್ ಹಾಗೂ ಗಡಿ ಅಭಿವೃದ್ಧಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗಡಿ ಸಮಸ್ಯೆ ಹಾಗೂ ಭಾಷಾಭಿವೃದ್ಧಿ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಅಕಾಡೆಮಿ ಅಧ್ಯಕ್ಷೆ ಉಷಾ ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಸಹಾರ್ದ ಸಂಸ್ಥೆ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಜಾನಪದ ಪರಿಷತ್ತಿನ ಜಿಲ್ಲಾ ಸಂಯೋಜಕ ಡಾ| ರಾಜಕುಮಾರ ಹೆಬ್ಟಾಳೆ, ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಹಿರಿಯ ಸಾಹಿತಿ ಡಾ| ಎಂ.ಜಿ. ದೇಶಪಾಂಡೆ, ಪ್ರಭಾಕರ ಎ.ಎಸ್ ಇತರರಿದ್ದರು. ಹರ್ಷವರ್ಧನ ಸ್ವಾಮಿ ನಿರೂಪಿಸಿದರು. ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ರಾಘವೇಂದ್ರ ಸ್ವಾಮಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಕಲಾವಿದರಾದ ದೇವಿದಾಸ ಚಿಮಕೋಡೆ, ಕಾಶಿನಾಥ ಪಾಟೀಲ, ಶರಣಪ್ಪ ಪಾಟಿಲ, ಮಹಾರುದ್ರಪ್ಪ ಗ್ಯಾನಪನೋರ್, ಮಹಾದೇವಿ ಸಂಗಡಿಗರಿಂದ ಜಾನಪದ ಗಾಯನ, ನೂಪುರ ನೃತ್ಯ ಅಕಾಡೆಮಿಯಿಂದ ಜಾನಪದ ನೃತ್ಯ ಕಾರ್ಯಕ್ರಮ ಜರುಗಿದವು. ನಂತರ ನಡೆದ ಕವಿಗೋಷ್ಠಿಯಲ್ಲಿ ಅನೇಕರು ಸ್ವರಚಿತ ಕವನ ವಾಚನ ಮಾಡಿದರು.