Advertisement

ಟ್ರಸ್ಟ್‌ ಅಧಿಕಾರದಿಂದ ಹೊರಟ್ಟಿ ಕೆಳಗಿಳಿಯಲಿ: ಪ್ರಸನ್ನಾನಂದ ಶ್ರೀ

06:00 AM Nov 01, 2018 | Team Udayavani |

ಕೊಪ್ಪಳ: ಸರ್ವೋದಯ ಶಿಕ್ಷಣ ಟ್ರಸ್ಟ್‌ನಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಕ್ರಮ ನಡೆಸಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಕೂಡಲೇ ಅವರು ಟ್ರಸ್ಟ್‌ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ವಾಲ್ಮೀಕಿ ರಾಜನಹಳ್ಳಿಯ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್‌ಗೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿಯಿವೆ. ಹೊರಟ್ಟಿ ಅವರು ಬೇಕಾದರೆ ಬಹಿರಂಗ ಚರ್ಚೆಗೆ ಬರಲಿ, ನಾವೂ ಚರ್ಚೆಗೆ ಸಿದ್ಧರಿದ್ದೇವೆ. ಟ್ರಸ್ಟ್‌ ಹೆಸರಿನಲ್ಲಿ ಅವ್ಯವಹಾರ ನಡೆಸಿದ ಪತ್ರ ವ್ಯವಹಾರದ ದಾಖಲೆಗಳಿವೆ. ತಪ್ಪು ಮಾಡಿದ್ದರೂ ಸಾರ್ವಜನಿಕವಾಗಿ ಸುಳ್ಳು ಹೇಳುತ್ತಿದ್ದಾರೆ. ಕೂಡಲೇ ಧಾರವಾಡದ ಸರ್ವೋದಯ ಶಿಕ್ಷಣ
ಟ್ರಸ್ಟ್‌ನಲ್ಲಿರುವ ಅ ಧಿಕಾರದಿಂದ ಕೆಳಗಿಳಿಯಬೇಕು. 50 ಕೋಟಿಗೂ ಹೆಚ್ಚು ಬೆಲೆ ಬಾಳುವ ಆಸ್ತಿ ಕಬಳಿಸಿ ಅಧಿಕಾರದಲ್ಲಿರುವುದು ಸರಿಯಲ್ಲ. ಅ ಧಿಕಾರದಿಂದ ಕೆಳಗಿಳಿಯದಿದ್ದರೆ ಸಮಾಜದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು. ಈ ಕುರಿತು 
ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದೇವೆ ಎಂದರು.

ವೀರ ಮದಕರಿ ಸಿನೆಮಾವನ್ನು ಯಾರಾದರೂ ಮಾಡಲಿ, ನಮ್ಮದು ಯಾವುದೇ ತಕರಾರಿಲ್ಲ. ಆದರೆ, ಸುದೀಪ್‌ ಅವರು ವಾಲ್ಮೀಕಿ ಸಮಾಜಕ್ಕೆ ಸೇರಿದ್ದರಿಂದ ಇತಿಹಾಸ ಅರ್ಥೈಸಿಕೊಂಡಿರುತ್ತಾರೆ ಎಂಬ ಕಾರಣಕ್ಕೆ ಅವರು ನಟನೆ ಮಾಡಲಿ ಎಂದಿರುವೆ. ಸಂಗೋಳಿ ರಾಯಣ್ಣ ಚಿತ್ರದಲ್ಲಿ ಕೆಲ ಇತಿಹಾಸದ ಘಟನೆಗಳನ್ನು ಮರೆಮಾಚಲಾಗಿದೆ. ಹೀಗಾಗಿ, ಇತಿಹಾಸ ಮರೆ ಮಾಚುವ ಕೆಲಸ ಮಾಡಿದರೆ ಕೋರ್ಟ್‌ನ ಮೊರೆ ಹೋಗಲಾಗುವುದು. ರಾಮುಲು ಅವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಲ್ಲ ಎಂದು ಹೇಳಿಕೆ ನೀಡಿದವರು
ಅವಿವೇಕಿಗಳು. ಅವರು ರಾಜಕಾರಣ ಮಾಡುವ ಸಲುವಾಗಿ ಈ ರೀತಿ ತುಚ್ಛ ಹೇಳಿಕೆ ನೀಡುತ್ತಿದ್ದಾರೆ. ರಾಮುಲು ನಮ್ಮ ಸಮಾಜದ ಹೆಮ್ಮೆಯ ಪುತ್ರ ಎಂದು ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next