Advertisement
ಮೃತಪಟ್ಟವರಲ್ಲಿ 9 ಮಂದಿಯ ಗುರುತು ಮಾತ್ರ ಪತ್ತೆಯಾಗಿದ್ದು, ಇನ್ನುಳಿದ ಐವರ ಗುರುತು ಪತ್ತೆ ಯಾಗಿಲ್ಲ. ನಾಗಸಮುದ್ರದ ಆಟೋ ಚಾಲಕ ಜಿ.ಎಸ್. ಬಸವರಾಜ (34), ವಡೇರಹಳ್ಳಿ ಗ್ರಾಮದ ವೈಶಾಲಿ (8), ಅಪ್ಪೇನಹಳ್ಳಿ ಗ್ರಾಮದ ಹನುಮಂತಪ್ಪ (45), ದುರುಗಮ್ಮ (40), ಚಿಂತಾ ಮಣಿ (13), ಹೊನ್ನೂರಪ್ಪ (48), ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿ ಗ್ರಾಮದ ಶಿವರಾಜ್ (9), ಲಿಂಗಪ್ಪ, ಜಯಮ್ಮ ಮೃತಪಟ್ಟವರು. ಈ ಪೈಕಿ ಲಿಂಗಪ್ಪ ಹಾಗೂ ಜಯಮ್ಮ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ತನ್ನ ಪುತ್ರನೊಂದಿಗೆ ಸ್ವಗ್ರಾಮ ಬೇವಿನ ಹಳ್ಳಿಗೆ ಟೆಂಪೋ ಟ್ರಾವೆಲರ್ನಲ್ಲಿ ತೆರಳುತ್ತಿದ್ದರು. ಆದರೆ ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದವರೇ ಮಸಣ ಸೇರು ವಂತಾಗಿದ್ದು ವಿಪರ್ಯಾಸ.
ವಾಗಿ ಗಾಯಗೊಂಡಿದ್ದಾರೆ. ಅವ ರಿಗೆ ರಾಂಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್ಗೆ ದಾಖಲಿಸಲಾಗಿದೆ. ಲಕ್ಷ ರೂ. ಪರಿಹಾರಕ್ಕೆ ಸೂಚನೆ: ಮೃತಪಟ್ಟವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡು ವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾರ್ಯಕ್ರಮ ನಿಮಿತ್ತ ಚಿತ್ತಾಪುರಕ್ಕೆ ಬಂದಿದ್ದ ಸಿಎಂ, ಪತ್ರಕರ್ತರ ಜತೆ ಮಾತನಾಡಿ, ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.