Advertisement

ವಿಜಯಪುರದಲ್ಲಿ ಹೊತ್ತಿ ಉರಿದ ಲಾರಿ;ಚಾಲಕ,ಕ್ಲೀನರ್‌ ಸಜೀವ ದಹನ 

09:42 AM Mar 28, 2017 | |

ವಿಜಯಪುರ: ಇಲ್ಲಿನ ಹಿಟ್ನಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ಲಾರಿಯೊಂದು ಹೊತ್ತಿ ಉರಿದು ಚಾಲಕ , ಕ್ಲೀನರ್‌ ಸಜೀವ ದಹನಗೊಂಡಿರುವ ದುರಂತ ಮಂಗಳವಾರ ಬೆಳಗಿನ ಜಾವ 4 ಗಂಟೆಯ ವೇಳೆ ಸಂಭವಿಸಿದೆ.   

Advertisement

ಕಬ್ಬಿಣ ತರುತ್ತಿದ್ದ  ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿಯಾಗಿ ಹೊತ್ತಿ ಉರಿದಿದ್ದು, ಈ ವೇಳೆ ಚಾಲಕ ಮತ್ತು ಕ್ಲೀನರ್‌ ಸಜೀವವಾಗಿ ದಹನಗೊಂಡಿದ್ದಾರೆ ಎಂದು ವರದಿಯಾಗಿದೆ. 

ಸೊಲ್ಲಾಪುರ ಮೂಲದ ಲಾರಿ ಎಂದು ಹೇಳಲಾಗಿದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಂಪೂರ್ಣ ಸುಟ್ಟು ಕರಕಲಾಗಿರುವ ಲಾರಿ ಮತ್ತು ಇಬ್ಬರ ಶವಗಳನ್ನು ಸ್ಥಳದಿಂದ  ತೆರವು ಮಾಡಿರುವ ಬಗ್ಗೆ ವರದಿಯಾಗಿದೆ. 

ಅವಘಡ ಹೇಗೆ ಸಂಭವಸಿದೆ ಎನ್ನುವ ಬಗ್ಗೆ ನಿಖರ ಮಾಹಿತಿ ಇನ್ನಷ್ಟೆ ಬರಬೇಕಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next