Advertisement

ಫೆಡರಲ್‌ ರಂಗ ರಚನೆ: ವೈಎಸ್‌ಆರ್‌ ಜತೆ ಮಾತುಕತೆ, ಕೆಸಿಆರ್‌ ನಿರ್ಧಾರ

07:00 AM Jan 16, 2019 | Team Udayavani |

ಹೈದರಾಬಾದ್‌ : ಬಿಜೆಪಿ ಮತ್ತು ಕಾಂಗ್ರೆಸ್‌ ರಹಿತವಾದ ಫೆಡರಲ್‌ ರಂಗವನ್ನು ರೂಪಿಸುವ ತನ್ನ ಯತ್ನವನ್ನು ತೀವ್ರಗೊಳಿಸಿರುವ  ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಖ್ಯಸ್ಥ ಕೆ ಚಂದ್ರಶೇಖರ ರಾವ್‌ ಅವರು ವೈಎಸ್‌ಆರ್‌ ಕಾಂಗ್ರೆಸ್‌ ಜತೆಗೆ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. 

Advertisement

ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ವೈ ಎಸ್‌ ಜಗನ್‌ಮೋಹನ್‌ ರೆಡ್ಡಿ ಅವರೊಂದಿಗೆ ಪ್ರಸ್ತಾವಿತ ವಿಪಕ್ಷ ಮೈತ್ರಿ ಕೂಟ ರಚನೆ ಸಂಬಂಧ ಮಾತುಕತೆ ನಡೆಸಲು ಕೆಸಿಆರ್‌ ಅವರು ತಮ್ಮ ಪಕ್ಷದ ಅಧ್ಯಕ್ಷ ಹಾಗೂ ತನ್ನ ಪುತ್ರ ಕೆ ಟಿ ರಾಮ ರಾವ್‌ ಮತ್ತು ಇತರ ಹಿರಿಯ ನಾಯಕರನ್ನು ಕಳುಹಿಸಿರುವುದಾಗಿ ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next